‘ಹಾಗಲಕಾಯಿ-ಗೋಡೆಕಾಯಿ ಸರ್ಕಾರಕ್ಕೆ ಮಿಸ್ಟರ್ ರೇವಣ್ಣ ಸಾಥ್’
ರಾಜ್ಯ ಹಾಗಲಕಾಯಿ-ಗೋಡೆಕಾಯಿ ಜುಗಲ್ ಬಂದಿ ಇದೆ. ರೇವಣ್ಣ ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ.. ಹೀಗೆಂದು ಏಕವಚನದಲ್ಲೇ ಆರೋಪ ಮಾಡಿದ್ದು ಜಿ.ಎಸ್.ಬಸವರಾಜು.
ತುಮಕೂರು[ನ.23] ದೋಸ್ತಿ ಸರಕಾರದ ಡಿಕೆ ಶಿವಕುಮಾರ್ ಮತ್ತಿ ಸಿಎಂ ಕುಮಾರಸ್ವಾಮಿ ಮೇಲೆ ಮಾಜಿ ಸಚಿವ ಜಿ.ಎಸ್.ಬಸವರಾಜು ವಾಗ್ದಾಳಿ ಮಾಡಿದ್ದಾರೆ. ಹಾಗಲಕಾಯಿ-ಗೋಡೆಕಾಯಿ ಅನ್ನೋ ಹಾಗೇ ಇಬ್ರೂ ಸೇರ್ಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಡಿಕೆಶಿ-ಹೆಚ್ಡಿಕೆ ವಿರುದ್ದ ಜಿ.ಎಸ್.ಬಸವರಾಜು ಏಕವಚನ ವಾಗ್ದಾಳಿ ನಡೆಸಿದ್ದು ರಾಮನಗರ-ಕನಕಪುರದ ಇಬ್ಬರೂ ಒಂದಾಗಿ ನಮಗೆ ಕಷ್ಟ ಆಗಿದೆ. ಮೊದಲು ಅವರವರೆ ಕೆಸರು ಎರಚಿಕೊಂಡು ಹೊಡೆದಾಡ್ತಿದ್ರು. ಇವೆರಡೂ ಪಕ್ಷ ಸೇರಿ ಸರ್ಕಾರ ಮಾಡಿ ಮಾಡಬಾರದ ಪಾಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಲಿಂಕಿಂಗ್ ಕೆನಾಲ್ ಮೂಲಕ ಮಾಗಡಿ ಗೆ ನೀರು ಕೊಂಡೊಯ್ಯುವ ಹುನ್ನಾರ ಮಾಡಲಾಗಿದೆ. ಡಿಕೆ ಬ್ರದರ್ಸ್, ಸಚಿವ ರೇವಣ್ಣರ ಕೈವಾಡ ಇದರಲ್ಲಿ ಇದೆ. ಸರ್ಕಾರ ಕೇವಲ ಹಾಸನ ರಾಮನಗರ ಮಂಡ್ಯಕ್ಕೆ ಸೀಮಿತವಾಗಿದೆ ಎಂದು ಆರೋಪಿಸಿದ್ದಾರೆ.
ಮಿಸ್ಟರ್ ರೇವಣ್ಣ...ನಿನಗೆ ಒಳ್ಳೆದಾಗಲ್ಲ... ದೇಶದ್ರೋಹ ಕೆಲಸ ಮಾಡ್ತಿದ್ದೀಯಾ. ನೀರಾವರಿ ಚೆರಮನ್ ಆಗಿ ಹೇಮಾವತಿ ನೀರು ತುಮಕೂರು ಜಿಲ್ಲೆಗೆ ನೀಡುವಲ್ಲಿ ಪಾಪ ಮಾಡ್ತಾ ಇದ್ದೀಯಾ. ಮುಂದಿನ ದಿನದಲ್ಲಿ ಈ ಪಾಪ ನಿನ್ನ ಸಂಸಾರಕ್ಕೂ ತಟ್ಟಲಿದೆ ಎಂದು ಏಕವಚನದಲ್ಲಿಯೇ ದಾಳಿ ಮಾಡಿದರು. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ನಿಟ್ಟೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಸವರಾಜು ಕಾಂಗ್ರೆಸ್, ಜೆಡಿಎಸ್ ಮುಖಂಡರನ್ನು ಮನಸೋ ಇಚ್ಛೆ ತರಾಟೆಗೆ ತೆಗೆದುಕೊಂಡರು.