ರಾಜಸ್ಥಾನದ ಪೋಕ್ರಾನ್'ನಲ್ಲಿ ಬಾಂಬ್ ಸ್ಫೋಟ: ದಾವಣೆಗೆರೆ ಯೋಧ ಹುತಾತ್ಮ
ಹರಿಹರ ಪಟ್ಟಣದ ಪಿಬಿ ರಸ್ತೆ ನಿವಾಸಿ ಜಾವಿದ್(32) ಹುತಾತ್ಮ ಯೋಧರು.
ದಾವಣಗೆರೆ(ಫೆ.13) : ರಾಜಸ್ಥಾನದ ಪೊಕ್ರಾನ್ ನಲ್ಲಿ ಬಾಂಬ್ ಸ್ಪೋಟದಲ್ಲಿ ದಾವಣಗೆರೆ ಯೋಧರೊಬ್ಬರು ಹುತಾತ್ಮನಾಗಿದ್ದಾರೆ.
ಹರಿಹರ ಪಟ್ಟಣದ ಪಿಬಿ ರಸ್ತೆ ನಿವಾಸಿ ಜಾವಿದ್(32) ಹುತಾತ್ಮ ಯೋಧರು. ಇವರು ಕಳೆದ 14 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ ಸೇನೆಯ 14ನೇ ಇಂಜಿನಿಯರಿಂಗ್ ರೆಜಿಮೆಂಟ್'ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.