Asianet Suvarna News Asianet Suvarna News

ಅಂಬಿ ಅಂತ್ಯಸಂಸ್ಕಾರ ಕಂಠೀರವದಲ್ಲಿ ಬೇಡ್ವಂತೆ: ಕೇಳಿ ಈ ವಕೀಲಪ್ಪನ ಅಂತೆ ಕಂತೆ!

ಈಗ ಬೇಕಿತ್ತಾ ಅಂಬಿ ಅಂತ್ಯಸಂಸ್ಕಾರ ವಿವಾದ?! ಅಂಬಿ ಅಂತ್ಯಸಂಸ್ಕಾರ ಕಂಠೀರವ ಸ್ಟುಡಿಯೋದಲ್ಲಿ ಮಾಡಲು ಅಪಸ್ವರ! ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಸಂಸ್ಕಾರ ನಡೆಸಲು ವಕೀಲ ಆರ್‌ಎಲ್‌ಎನ್ ಮೂರ್ತಿ ಅಪಸ್ವರ! ರಾಜ್ಯಪಾಲರು, ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಮತ್ತು ಮುಖ್ಯ ನ್ಯಾಯಮೂರ್ತಿಗೆ ಪತ್ರ

Advocate opposes for Ambareesh cremation in Kanteerava Studio
Author
Bengaluru, First Published Nov 25, 2018, 2:38 PM IST

ಬೆಂಗಳೂರು(ನ.25): ರೆಬಲ್ ಸ್ಟಾರ್, ಕಲಿಯುಗದ ಕರ್ಣ, ಮಂಡ್ಯದ ಗಂಡು ಅಂಬರೀಷ್ ಅಗಲಿಕೆಯ ನೋವಲ್ಲಿ ಇಡೀ ಕರ್ನಾಟಕ ಕಣ್ಣೀರಿಡುತ್ತಿದೆ. ಆದರೆ ಅಂಬರೀಷ್ ಅಂತ್ಯಸಂಸ್ಕಾರಕ್ಕೆ ಸಂಬಂಧಿಸಿದಂತೆ ಹೊಸದೊಂದು ವಿವಾದ ಸೃಷ್ಟಿಯಾಗಿರುವುದು ನಿಜಕ್ಕೂ ದುರದೃಷ್ಟಕರ.

"

Advocate opposes for Ambareesh cremation in Kanteerava Studio

ಹೌದು, ಕಂಠೀರವ ಸ್ಟುಡಿಯೋದಲ್ಲಿ ಅಂಬರೀಷ್ ಅಂತ್ಯಸಂಸ್ಕಾರಕ್ಕೆ ಅವಕಾಶ ಕೊಡಬಾರದು ಎಂದು ಆರ್‌ಎಲ್‌ಎನ್ ಮೂರ್ತಿ ಎಂಬ ವಕೀಲರು ರಾಜ್ಯಪಾಲರು, ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಮತ್ತು ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದಾರೆ.

"

ಕಠೀರವ ಸ್ಟುಡಿಯೋ ಇರುವುದು ಕನ್ನಡ ಚಿತ್ರರಂಗದ ಅಭಿವೃದ್ಧಿಗಾಗಿಯೇ ಹೊರತು ನಟ, ನಟಿಯರ ಅಂತ್ಯಸಂಸ್ಕಾರಕ್ಕೆ ಅಲ್ಲ ಎಂಬುದು ಆರ್‌ಎಲ್‌ಎನ್ ಮೂರ್ತಿ ಅವರ ವಾದವಾಗಿದೆ.

ಈ ಕುರಿತು ಸುವರ್ಣನ್ಯೂಸ್ ಜೊತೆ ಮಾತನಾಡಿರುವ ಆರ್‌ಎಲ್‌ಎನ್ ಮೂರ್ತಿ, ಯಾವುದೇ ಕಾರಣಕ್ಕೂ ಕಠೀರವ ಸ್ಟುಡಿಯೋದಲ್ಲಿ ಅಂಬರೀಷ್ ಅಂತ್ಯಸಂಸ್ಕಾರಕ್ಕೆ ಅವಕಾಶ ಮಾಡಕೊಡಬಾರದು ಎಂದು ಹೇಳಿದ್ದಾರೆ.

Follow Us:
Download App:
  • android
  • ios