ಮುಂಬೈನಲ್ಲಿ 2600 ಮರಗಳ ಹನನ: ಇಂದು ಸುಪ್ರೀಂ ವಿಚಾರಣೆ
ಮರಗಳ ಹನನ ಪ್ರಶ್ನಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ 2 ಬಾರಿ ತಿರಸ್ಕರಿಸಿತ್ತು| ತೀವ್ರ ಪ್ರತಿಭಟನೆ ಇಂದು ಸುಪ್ರೀಂ ವಿಚಾರಣೆ|
ನವದೆಹಲಿ[ಆ.07]: ಮುಂಬೈನಲ್ಲಿ ಮೆಟ್ರೋ ರೈಲು ಡಿಪೋಗೆಂದು ಆರೇ ಅರಣ್ಯದ 2600ಕ್ಕೂ ಹೆಚ್ಚು ಮರಗಳ ಕಡಿತ ಕುರಿತಂತೆ ಸುಪ್ರೀಂ ಕೋರ್ಟ್ ವಿಶೇಷ ಪೀಠ ಸೋಮವಾರ ಬೆಳಗ್ಗೆ 10 ಗಂಟೆಗೆ ವಿಚಾರಣೆ ನಡೆಸಲಿದೆ.
ಮರಗಳ ಹನನ ಪ್ರಶ್ನಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ 2 ಬಾರಿ ತಿರಸ್ಕರಿಸಿತ್ತು. ಇದರ ಬೆನ್ನಲ್ಲೇ ಮರ ಕಡಿತ ಖಂಡಿಸಿ ಮುಂಬೈನಲ್ಲಿ ಪ್ರತಿಭಟನೆ ತಾರಕಕ್ಕೇರಿತ್ತು. ಈ ನಡುವೆ, ನೋಯ್ಡಾದ ಕಾನೂನು ವಿದ್ಯಾರ್ಥಿಗಳು, ಮರ ಕಡಿತ ವಿರೋಧಿಸಿ ಮುಖ್ಯ ನ್ಯಾಯಾಧೀಶ ನ್ಯಾ| ರಂಜನ್ ಗೊಗೋಯ್ ಅವರಿಗೆ ಪತ್ರ ಬರೆದಿದ್ದರು.
ಮೆಟ್ರೋಗಾಗಿ 2600 ಮರ ಕಡಿಯಲು ಕೋರ್ಟ್ ಸಮ್ಮತಿ!
ಇದನ್ನೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಪರಿಗಣಿಸಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ.