ಶ್ರೀರಾಮನ ಬಗ್ಗೆ ಬರೆಯುವ ಭಗವಾನ್ ದೊಡ್ಡ ದುರಂತ: ಹಿರಿಯ ಕಾಂಗ್ರೆಸ್ಸಿಗ
ಶ್ರೀರಾಮನ ಬಗ್ಗೆ ಮಾತನಾಡಿ, ಪುಸ್ತಕದಲ್ಲಿ ಹಲವು ವಿಚಾರ ಬರೆದುಕೊಂಡಿರುವ .ಕೆಎಸ್. ಭಗವಾನ್ ವಿಚಾರಕ್ಕೆ ಸಂಬಂಧಿಸಿ ಕೇಂದ್ರದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ.
ಮಂಗಳೂರು[ಜ.07] ‘ಪ್ರೊ.ಭಗವಾನ್ ಅವರು ದೊಡ್ಡ ದುರಂತ. ಶ್ರೀರಾಮನ ಬಗ್ಗೆ ಮಾತನಾಡಲು ಶ್ರೀರಾಮ ಇದ್ದಾಗ ಭಗವಾನ್ ಇದ್ದರೇ? ಶ್ರೀರಾಮ ಮಾಂಸ ತಿನ್ನುವುದನ್ನು ಭಗವಾನ್ ನೋಡಿದ್ದಾರೆಯೇ? ಆಗ ಭಗವಾನ್ ಹುಟ್ಟಿದ್ದರೇ? ನಾಲಗೆ ಇದೆ ಎಂದು ಏನು ಕೂಡ ಮಾತನಾಡುವುದಲ್ಲ’ ಎಂದು ಜನಾರ್ದನ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ.
ಜನವರಿ 8 - 9 ರಂದು ಭಾರತ್ ಬಂದ್ : ಏನಿರುತ್ತೆ..? ಏನಿರಲ್ಲ..?
ಮಂಗಳೂರಿನ ಕುದ್ರೋಳಿ ದೇವಸ್ಥಾನದಲ್ಲಿ ಮಾತನಾಡಿದ ಪೂಜಾರಿ, ಶಬರಿಮಲೆಗೆ ಮಹಿಳೆಯರ ಪ್ರವೇಶ ವಿರೋಧಿಸುವವರ ವಿರುದ್ಧ ಕೇರಳ ಮುಖ್ಯಮಂತ್ರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಸ್ಪರ್ಧಿಸಲು ಟಿಕೆಟ್ಗೆ ದೆಹಲಿಗೆ ತೆರಳುವುದಾಗಿ ಪೂಜಾರಿ ಇದೇ ವೇಳೆ ತಿಳಿಸಿದರು.
ಶ್ರೀರಾಮನ ಬಗ್ಗೆ ಭಗವಾನ್ ಹೇಳಿದ್ದೇನು?