Asianet Suvarna News Asianet Suvarna News

ಫಾರಂಗೆ ನುಗ್ಗಿದ ಮಳೆ ನೀರು: 7 ಟನ್‌ ಕೋಳಿಗಳು ಜಲಾವೃತ

ತುಮಕೂರಿನ ಪಾವಗಡ ತಾಲೂಕಿನಲ್ಲಿ ಸತತವಾಗಿ ಸುರಿದ ಮಳೆಯಿಂದಾಗಿ ಕೋಳಿ ಫಾರಂ ಜಲಾವೃತವಾಗಿದೆ. 7 ಟನ್‌ ಕೋಳಿಗಳು ಜಲಾ​ವೃ​ತ್ತ​ವಾಗಿ ನೀರಿ​ನಲ್ಲಿ ಕೊಚ್ಚಿ ಹೋದ ಘಟನೆ ನಡೆದಿದ್ದು, 8 ಲಕ್ಷ ರುಪಾಯಿಯಷ್ಟು ನಷ್ಟವಾಗಿದೆ.

heavy rain lashes in tumakuru Chicken Forum submerged in water
Author
Bangalore, First Published Oct 5, 2019, 11:20 AM IST

ತುಮಕೂರು(ಅ.05): ರಾತ್ರಿ​ಯಿಡಿ ಸತ​ತ​ವಾಗಿ ಸುರಿದ ಭಾರೀ ಪ್ರಮಾ​ಣದ ಮಳೆ​ಯಿಂದ ಫಾರಂಗೆ ನೀರು ನುಗ್ಗಿ 8 ಲಕ್ಷ ರು. ಮೌಲ್ಯದ ಸುಮಾರು 7 ಟನ್‌ ಕೋಳಿಗಳು ಜಲಾ​ವೃ​ತ್ತ​ವಾಗಿ ನೀರಿ​ನಲ್ಲಿ ಕೊಚ್ಚಿ ಹೋದ ಘಟನೆ ಗುರು​ವಾರ ರಾತ್ರಿ  ಪಾವ​ಗಡ ತಾಲೂ​ಕಿನ ವೀರ್ಲ​ಗೊಂದಿ ಗ್ರಾಮ​ದ ಹೊರ​ವ​ಲ​ಯ​ದಲ್ಲಿ ನಡೆ​ದಿ​ದೆ.

ಗ್ರಾಮದ ವಾಸಿ ನಿವೃತ್ತ ಕಂದಾಯ ಅಧಿಕಾರಿ ರೈತ ನರ​ಸಿಂಹಪ್ಪ ಗ್ರಾಮದ ತಮ್ಮ ಜಮೀ​ನಿ​ನಲ್ಲಿ ಬೃಹತ್‌ ಮಟ್ಟದ ಫಾರಂ ಕೋಳಿ ಸಾಗಾ​ಣಿ​ಕೆ​ಯಲ್ಲಿ ನಿರ​ತ​ವಾ​ಗಿದ್ದರು. ರಾತ್ರಿ​ಯಿಡಿ ಸತ​ತ​ವಾಗಿ ಸುರಿದ ಮಳೆ​ಯಿಂದ ಅಪಾರ ಪ್ರಮಾ​ಣದ ನೀರು ಶೆಡ್‌ಗೆ ನುಗ್ಗಿದೆ.

ಕೊನೆಗೂ ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಜನತೆ

ಈ ವೇಳೆ ಶೆಡ್‌ನಲ್ಲಿದ್ದ 8 ಲಕ್ಷ ರು. ಬೆಲೆ​ಬಾ​ಳುವ ಸುಮಾರು 7 ಟನ್‌ ಕೋಳಿ​ಗಳು ಜಲಾ​ವೃ​ತವಾಗಿ ಸಾವ​ನ್ನ​ಪ್ಪಿದ್ದು ಅಪಾರ ಪ್ರಮಾ​ಣದ ಕೋಳಿ​ಗಳು ನೀರಿ​ನಲ್ಲಿ ಕೊಚ್ಚಿ ಹೋಗಿ ಭಾರಿ ಪ್ರಮಾಣದಲ್ಲಿ ನಷ್ಟಉಂಟಾಗಿದೆ. ಇ​ದ​ರಿಂದ ರೈತ ನರ​ಸಿಂಹಪ್ಪ ತೀವ್ರ ಕಂಗಾ​ಲಾ​ಗಿದ್ದು, ದಿಕ್ಕು ಕಾಣದೆ ಪರ​ದಾಟ ನಡೆ​ಸುವ ಸ್ಥಿತಿ ನಿರ್ಮಾಣವಾಗಿದೆ.

ಹುಳಿಯಾರುವಿನಲ್ಲಿ ಚರಂಡಿಗೆ ಬಿದ್ದು ವ್ಯಕ್ತಿ ಸಾವು

ವಿ​ಷಯ ತಿಳಿ​ಯು​ತ್ತಿ​ದ್ದಂತೆ ತಹ​ಸೀ​ಲ್ದಾರ್‌ ವರ​ದ​ರಾ​ಜ್‌, ​ತಾಲೂಕು ಕಂದಾಯ ಇಲಾಖೆ ನಿರೀ​ಕ್ಷಕ ಗಿರೀಶ್‌, ಗ್ರಾಪಂ ಅಧ್ಯಕ್ಷರಾದ ಲಕ್ಷ್ಮೀ ಧನುಂಜ​ಯ,​ ತಾಪಂ ಸದಸ್ಯ ತಮ್ಮಣ್ಣ ಹಾಗೂ ಸಂಬಂಧ​ಪಟ್ಟಇಲಾಖೆ ಅಧಿಕಾ​ರಿ​ಗಳು, ಜನ​ಪ್ರ​ತಿ​ನಿ​ಧಿ​ಗಳು ತೆರಳಿ ಪ​ರಿ​ಶೀ​ಲಿಸಿ ವರ​ದಿ​ ಪ​ಡೆ​ದಿದ್ದು ಈ ಸಂಬಂಧ ಕೂಡಲೇ ಪರಿ​ಹಾರ ಕಲ್ಪಿಸುವ ಮೂಲಕ ರೈತನ ನೆರ​ವಿಗೆ ಬರು​ವಂತೆ ಇಲ್ಲಿನ ಹಸಿರು ಸೇನೆ ಹಾಗೂ ಇತರೆ ರೈತ ಸಂಘ​ಟ​ನೆ​ಗಳ ಪದಾ​ಧಿ​ಕಾ​ರಿ​ಗಳು ಸಕಾ​ರ್‍ರಕ್ಕೆ ಒತ್ತಾ​ಯಿ​ಸಿದ್ದಾರೆ.

ಕಸಬಾ, ನಿಡ​ಗಲ್‌ ವ್ಯಾಪ್ತಿ​ಯಲ್ಲಿ ಭಾರಿ ಮಳೆ:

ಗುರುವಾರ ರಾತ್ರಿ​ಯಿಡಿ ಸುರಿದ ವರು​ಣನ ಅಭ​ರ್‍ಟಕ್ಕೆ ಕಸಬಾ ಹಾಗೂ ನಿಡ​ಗಲ್‌ ಹೋಬ​ಳಿ ವ್ಯಾಪ್ತಿ​ ಗ್ರಾಮ​ಗ​ಳಲ್ಲಿ ಅಪಾರ ಪ್ರಮಾ​ಣದ ನಷ್ಟಸಂಭ​ವಿ​ಸಿದ್ದು, ಅಡಿಕೆ ವಿಲ್ಯ​ದೆಲೆ ಪಪ್ಪಾ​ಯಿ, ದಾಳಿಂಬೆ, ಬಾಳೆ ಹಾಗೂ ಇತರೆ ತೋಟ​ಗಾ​ರಿಕೆ ಬೆಳೆ​ಗಳು ನಷ್ಟ​ಕ್ಕಿ​ಡಾ​ಗಿ​ವೆ.

'ಅನರ್ಹರ ನೋಯಿಸಿದರೆ ಬಿಜೆಪಿಗೆ ಶಾಪ ತಟ್ಟುತ್ತೆ'

ಕ​ಸಬಾ ವ್ಯಾಪ್ತಿಯ ನೆಲ​ಗಾ​ನ​ಹಳ್ಳಿ, ವೀ​ರ್ಲ​ಗೊಂದಿ, ಕನ್ನ​ಮೇಡಿ, ಬ್ಯಾಡ​ನೂರು ಕೃಷ್ಣ​ಗಿರಿ, ಆರ್ಲ​ಹಳ್ಳಿ ದೇವ​ರ​ಹಟ್ಟಿಹಾಗೂ ಸುತ್ತ​ಮುತ್ತ ಗ್ರಾಮ​ಗ​ಳಲ್ಲಿ ಶೇಂಗಾ, ರಾಗಿ ಸೇರಿ​ದಂತೆ ತೋಟ​ಗಾ​ರಿಕೆ ಬೆಳೆ​ಗಳು ಜಲಾ​ವೃ​ತ್ತ​ವಾ​ಗಿದ್ದು, ಅಲ್ಲಲಿ ನೀರು ನುಗ್ಗಿದ ಪರಿÜಣಾಮ ಮನೆಗಳು ಕುಸಿ​ತ​ಗೊಂಡಿರುವ ಬಗ್ಗೆ ವರ​ದಿ​ಗ​ಳಾ​ಗಿ​ವೆ.

ಕೆರೆ ಕಟ್ಟೆಗಳಲ್ಲಿ ನೀರು ಸಂಗ್ರಹ:

ಹಳ್ಳ​ಕೊ​ಳ್ಳ​ಗಳು ತುಂಬಿ ಹರಿ​ಯು​ತ್ತಿದ್ದು ಬಹು​ತೇಕ ಕೆರೆ​ಕುಂಟೆ​ಗ​ಳಲ್ಲಿ ಹೆಚ್ಚು ನೀರು ಸಂಗ್ರಹ​ವಾ​ಗಿ​ದೆ. ತಾಲೂ​ಕಿನ ನಿಡ​ಗಲ್‌ ಹೋಬಳಿ ವ್ಯಾಪ್ತಿಯ ನ್ಯಾಯ​ದ​ಗುಂಟೆ,​ ಕೋ​ಡಿ​ಗೆ​ನ​ಹಳ್ಳಿ, ಸಿ.​ಕೆ.​ಪುರ, ಮಂಗ​ಳ​ವಾಡ ಗುಜ್ಜಾ​ರ​ಹಳ್ಳಿ, ಲಿಂಗ​ದ​ಹಳ್ಳಿ ಶೈಲಾ​ಪು​ರ, ​ರಂಗ​ಸ​ಮುದ್ರ, ಓಬ​ಳಾ​ಪು​ರ, ಗೊಲ್ಲನ​ಕುಂಟೆ ಹರಿ​ಹ​ರ​ಪುರ ಕೆ.ಟಿ​ಹಳ್ಳಿ ಹಾಗೂ ಇತರೆ ಗ್ರಾಮ​ಗ​ಳಲ್ಲಿ ಭಾರೀ ಪ್ರಮಾ​ಣದ ಮಳೆ ಬಿದ್ದ ಪರಿ​ಣಾಮ ಕರೆ​ಕುಂಟೆ​ಗ​ಳಿಗೆ ಅಪಾರ ನೀರು ಸಂಗ್ರ​ವಾ​ಗಿದ್ದು, ಜೀವ​ನೋ​ಪಾ​ಯ ಬೆಳೆ​ಗ​ಳಾದ ಹೂವಿ​ನ​ಗಿ​ಡ​, ಅ​ಡಿಕೆ ವಿಳ್ಯ​ದೆಲೆ ಶೇಂಗಾ ದಾಳಿಂಬೆ ತೋಟ​ಗಳು ಜಲಾವೃ​ತ್ತ​ವಾಗಿ ರೈತರು ಹಾಗೂ ಕೃಷಿ ಕಾಮಿ​ರ್‍ಕರು ತೀವೃ ಆತಂಕ​ಕ್ಕಿ​ಡಾ​ಗಿ​ದ್ದಾ​ರೆ.

Follow Us:
Download App:
  • android
  • ios