ಜಾಫರ್ ಷರೀಫ್ ನಿಧನಕ್ಕೆ ಗಣ್ಯರ ಸಂತಾಪ
ಕಳೆದ ಶುಕ್ರವಾರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದ ಷರೀಫ್ | ನರಸಿಂಹ ರಾವ್ ಸಂಪುಟದಲ್ಲಿ ರೈಲ್ವೇ ಸಚಿವರಾಗಿ ಸೇವೆ ಸಲ್ಲಿಸಿದ್ದ ಜಾಫರ್ ಷರೀಫ್
ಬೆಂಗಳೂರು: ಕೇಂದ್ರ ಸಚಿವ ಅನಂತ್ ಕುಮಾರ್, ಬಳಿಕ ಹಿರಿಯ ನಟ-ರಾಜಕಾರಣಿ ಅಂಬರೀಷ್ ನಿಧನದಿಂದ ಚೇತರಿಸುವ ಮುನ್ನವೇ, ಕರ್ನಾಟಕಕ್ಕೆ ಮತ್ತೊಂದು ಆಘಾತವಾಗಿದೆ. ಹಿರಿಯ ರಾಜಕಾರಣಿ, ಮಾಜಿ ಕೇಂದ್ರ ಸಚಿವ ಜಾಫರ್ ಷರೀಫ್ ವಿಧಿವಶರಾಗಿದ್ದಾರೆ.
ಷರೀಫ್ ನಿಧನಕ್ಕೆ ರಾಜಕೀಯ ನಾಯಕರು, ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.
It is a day of tragedy for the Congress party, with another senior, loved & respected member of our family in Karnataka, Shri Jaffer Sharief Ji, passing away today. My condolences to his family, friends & supporters in their time of grief. #JafferSharief
— Rahul Gandhi (@RahulGandhi) November 25, 2018
ಕೇಂದ್ರದ ಮಾಜಿ ಸಚಿವ ಜಾಫರ್ ಷರೀಫ್ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ
ಕೇಂದ್ರದ ಮಾಜಿ ಸಚಿವ ಜಾಫರ್ ಷರೀಫ್ ಅವರ ನಿಧನಕ್ಕೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 'ನಮ್ಮ ಕುಟುಂಬದೊಂದಿಗೆ ಜಾಫರ್ ಷರೀಫ್ ಅವರು ಆತ್ಮೀಯ ಸಂಬಂಧ ಹೊಂದಿದ್ದರು. ಕೇಂದ್ರ ಸಚಿವರಾಗಿ ಅವರು ನಾಡಿಗೆ, ದೇಶಕ್ಕೆ ಅತ್ಯುತ್ತಮ ಕೊಡುಗೆ ನೀಡಿದ್ದಾರೆ. ರೈಲ್ವೆ ಸಚಿವರಾಗಿ ಕರ್ನಾಟಕ ರಾಜ್ಯಕ್ಕೆ ಅವರು ನೀಡಿದ ಕೊಡುಗೆ ಅತ್ಯಂತ ಶ್ಲಾಘನೀಯ. ರೈಲ್ವೆ ಸಚಿವರಾಗಿ ಕರ್ನಾಟಕ ರಾಜ್ಯಕ್ಕೆ ಅತಿ ಹೆಚ್ಚು ಕೊಡುಗೆ ನೀಡಿದವರಲ್ಲಿ ಜಾಫರ್ ಶರೀಫರು ಅಗ್ರಗಣ್ಯರು. ರಾಷ್ಟ್ರಾದ್ಯಂತ ಮೀಟರ್ ಗೇಜ್ ಹಳಿಗಳನ್ನು ಬ್ರಾಡ್ಗೇಜ್ ಗೆ ಪರಿವರ್ತಿಸಿ ಶ್ರೇಯ ಇವರದ್ದು' ಎಂದು ಮುಖ್ಯಮಂತ್ರಿ ಗಳು ಸ್ಮರಿಸಿದ್ದಾರೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಕುಟುಂಬ ವರ್ಗ ಹಾಗೂ ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಕರುಣಿಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ:
ಹಿರಿಯ ಕಾಂಗ್ರೆಸ್ ನಾಯಕ ಮತ್ತು ಕೇಂದ್ರದಮಾಜಿ ಸಚಿವ ಸಿ.ಕೆ.ಜಾಫರ್ ಷರೀಪ್ ಅವರ ನಿಧನದಿಂದ ಅತೀವ ದು:ಖವಾಗಿದೆ.ಸಾಮಾನ್ಯ ಕುಟುಂಬದಲ್ಲಿಹುಟ್ಟಿ ಸ್ವಪ್ರಯತ್ನದಿಂದ ರಾಷ್ಟ್ರರಾಜಕಾರಣದ ಪ್ರಮುಖನಾಯಕರಾಗಿ ಬೆಳೆದವರು ಷರೀಪ್. ರೈಲ್ವೆ ಸಚಿವರಾಗಿ ಕರ್ನಾಟಕಕ್ಕೆ ಅವರ ಕೊಡುಗೆ ಸದಾಸ್ಮರಣೀಯ. ಅವರ ಕುಟುಂಬಸ್ಥರ ದು:ಖದಲ್ಲಿ ನಾನು ಭಾಗಿಯಾಗಿದ್ದೇನೆ. pic.twitter.com/q846BFKF4n
— Siddaramaiah (@siddaramaiah) November 25, 2018
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಂತಾಪ:
Shocked and saddened to hear about the demise of veteran Congress leader and former union minister Shri CK Jaffer Sharief, who rose from humble origins to dominate the political scene of the country for many decades. May his soul rest in peace.
— KPCC President (@KPCCPresident) November 25, 2018
ರಾಜಕೀಯ ಮುತ್ಸದ್ಧಿ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಜಾಫರ್ ಶರೀಫ್ ಅವರ ನಿಧನದ ಸುದ್ದಿ ಅತೀವ ನೋವು ತರಿಸಿದೆ. ದೇವರು ಇವರ ಆತ್ಮಕ್ಕೆ ಶಾಂತಿ ಕರುಣಿಸಲಿ. ಇವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ. pic.twitter.com/1IBIuNuL9H
— B.S. Yeddyurappa (@BSYBJP) November 25, 2018
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಶೋಕ:
ಸಿ.ಕೆ ಜಾಫರ್ ಷರೀಫ್ ನಿಧನದಿಂದ ರಾಜ್ಯ ಮುತ್ಸದ್ದಿಯನ್ನು ಕಳೆದುಕೊಂಡಿದೆ. ಉತ್ತಮ ಸ್ನೇಹಿತನನ್ನು ನಾನು ಕಳೆದುಕೊಂಡಿದ್ದೇನೆ. ಭಾರತದ ರೈಲು ಮಾರ್ಗಗಳನ್ನು ಬ್ರಾಡ್ ಗೇಜ್ ಮಾಡುವುದರಲ್ಲಿ ಪ್ರಧಾನ ಪಾತ್ರ ವಹಿಸಿದ್ದು ಷರೀಫ್. ಯಲಹಂಕದ ರೈಲು ಗಾಲಿ ಕಾರ್ಖಾನೆ ಅವರದೇ ಕೊಡುಗೆ. ಅವರ ಅಗಲಿಕೆ ನೋವು ತಂದಿದೆ. ಅವರ ಕುಟುಂಬಕ್ಕೆ ಭಗವಂತನ ಕೃಪೆ ಇರಲಿ.
— H D Devegowda (@H_D_Devegowda) November 25, 2018
ಡಿಸಿಎಂ ಪರಮೇಶ್ವರ್ ಸಂತಾಪ:
Deeply saddened by the news of dear friend Sri Jaffer Sharief's demise. As a successful union minister, he improved the state of railways in Karnataka & India. His was a voice for minorities & communal harmony. An invaluable asset to the state & party. He will be missed dearly! pic.twitter.com/OEMF24KaJU
— Dr. G Parameshwara (@DrParameshwara) November 25, 2018
ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ದೇಶದ ರೈಲ್ವೇ ಸಚಿವರ ಹಂತಕ್ಕೆ ಬೆಳೆದ ಶ್ರೀ ಜಾಫರ್ ಷರೀಫ್ ರವರ ನಿಧನದ ವಾರ್ತೆ ಕೇಳಿ ವಿಷಾದವೆನಿಸಿದೆ. ನಮ್ಮ ಸರ್ಕಾರದ ಆಡಳಿತವಿದ್ದಾಗ ನನ್ನ ಅಧಿಕೃತ ನಿವಾಸಕ್ಕೆ ಅದೆಷ್ಟೋ ಬಾರಿ ಬಂದು ನನ್ನೊಡನೆ ಅನೇಕ ವಿಚಾರಗಳನ್ನು ಚರ್ಚಿಸಿದ್ದರು.
— Sureshkumar (@nimmasuresh) November 25, 2018
ಬಹಳ ದೀರ್ಘ ಕಾಲದ ರಾಜಕೀಯ-ಆಡಳಿತದ ಅನುಭವ ಅವರದು. pic.twitter.com/BPuzcoWyYU