ಈ ರಾಶಿಯವರಿಗಿಂದು ಅತ್ಯಧಿಕ ಲಾಭ : ಕೊಂಚ ಎಚ್ಚರ ಅಗತ್ಯ
ವಿಶೇಷ ಭವಿಷ್ಯದಲ್ಲಿ ನಿಮ್ಮ ರಾಶಿಯ ಫಲಾ ಫಲಗಳೇನಿದೆ.
ಶ್ರೀ ವಿಲಂಬಿ ನಾಮ ಸಂವತ್ಸರ
ಉತ್ತರಾಯಣ
ಶಿಶಿರ
ಫಾಲ್ಗುಣ ಮಾಸ
ಶುಕ್ಲ ಪಕ್ಷ
ದ್ವಿತೀಯಾ ತಿಥಿ
ಉತ್ತರಾಭಾದ್ರ ನಕ್ಷತ್ರ
====================
ರಾಹುಕಾಲ : 11.01 ರಿಂದ 12.31
ಯಮಗಂಡ ಕಾಲ : 03.29 ರಿಂದ 04.59
ಗುಳಿಕ ಕಾಲ : 08.02 ರಿಂದ 09.32
=============================
ಮೇಷ ರಾಶಿ : ಸಾಹಸ ಕಾರ್ಯಗಳಿಗೆ ಚಾಲನೆ, ನಿಮ್ಮ ವ್ಯಾಪಾರ ಲಾಭದಾಯಕವಾಗಿರುತ್ತದೆ, ಕತ್ತಿನ ಭಾಗದಲ್ಲಿ ತೊಂದರೆಯಾಗುವ ಸಾಧ್ಯತೆ, ಆರೋಗ್ಯದಲ್ಲಿ ಸುಧಾರಣೆ, ಮಾನಸಿಕ ಅಸಮಧಾನ, ಹಿರಿಯರ ಸಹಕಾರ.
ದೋಷಪರಿಹಾರ : ನಾಗದೇವರ ಆರಾಧನೆ ಮಾಡಿ
ವೃಷಭ : ಲಾಭದ ದಿನ, ಧನ ಸಮೃದ್ಧಿ, ದಾಂಪತ್ಯದಲ್ಲಿ ಅನ್ಯೋನ್ಯತೆ, ಆದರೆ ಕಾಲಿನ ಭಾಗ, ವಾತ ಸಂಬಂಧಿ ರೋಗಗಳು ಬಾಧಿಸಲಿವೆ, ಮಾತಿನಿಂದ ಧನಲಾಭ, ತಾಯಿಯಿಂದ ಉದ್ಯೋಗಕ್ಕೆ ಸಹಕಾರ ದೊರೆಯಲಿದೆ.
ದೋಷ ಪರಿಹಾರ : ಅನ್ನಪೂರ್ಣೇಶ್ವರಿ ಆರಾಧನೆ ಮಾಡಿ
ಮಿಥುನ : ಅನ್ಯೋನ್ಯ ಮಿತ್ರರೂ ದೂರವಾಗುತ್ತಾರೆ, ನಿಮ್ಮ ಮಾತು-ಚತುರತೆ ಶತ್ರುಗಳನ್ನೂ ಮಿತ್ರರನ್ನಾಗಿಸುತ್ತದೆ, ವೃಥಾ ತಿರುಗಾಟ ಧನ ವ್ಯಯ, ವ್ಯಾಪಾರದಲ್ಲಿ ಶತ್ರುತ್ವ , ಬೇಸರ ಉಂಟುಮಾಡಲಿದೆ.
ದೋಷ ಪರಿಹಾರ : ವಿಷ್ಣು ಸಹಸ್ರನಾಮ ಪಠಿಸಿ
ಕಟಕ : ನಿಮ್ಮ ಆಲೋಚನೆ ಫಲ ರಹಿತವಾಗಬಹುದು, ದೃಢ ನಿರ್ಧಾರ ಸಾಧ್ಯವಾಗದು, ಗೊಂದಲದ ವಾತಾವರಣ, ಉದ್ಯೋಗದಲ್ಲಿ ಕಿರಿಕಿರಿ, ಹಿರಿಯ ಅಧಿಕಾರಿಗಳು ನಿಮ್ಮನ್ನು ಕಾಡಲಿದ್ದಾರೆ.
ದೋಷ ಪರಿಹಾರ : ದೀಪ ನಮಸ್ಕಾರ ಮಾಡಿ
ಸಿಂಹ : ನಿಮ್ಮ ಮಡದಿಯಿಂದ ಸಹಕಾರ, ಕೆಲವರಿಗೆ ಭಿನ್ನಾಭಿಪ್ರಾಯ ಎರಡೂ ರೀತಿಯ ಫಲಗಳಿವೆ, ತಾಯಿಯಿಂದ, ಹಿರಿಯರಿಂದ ಧನಾನುಕೂಲ, ಆದರೆ ಮಾನಸಿಕ ಬೇಸರವೂ ಇರಲಿದೆ, ಕುಟುಂಬ ಸೌಖ್ಯ.
ದೋಷ ಪರಿಹಾರ : ಶಿವನಿಗೆ ರುದ್ರಾಭಿಷೇಕ ಮಾಡಿಸಿ
ಕನ್ಯಾ : ನಿಮ್ಮ ಸಹೋದರರಿಂದ ಸಮಾಧಾನದ ಮಾತುಗಳು, ಧನ ಸಹಾಯವೂ ಇದೆ, ಮನಸ್ಸು ನಿರಾಳವಾಗುತ್ತದೆ, ಆದರೆ ತಂದೆಯಿಂದ ಸ್ವಲ್ಪ ವಿರೋಧದ ಮಾತು ಕೇಳುತ್ತೀರಿ, ದಾಂಪತ್ಯದಲ್ಲಿ ಚಂಚಲತೆ ಹಾಗೂ ವಿರಸ ಉಂಟಾಗಲಿದೆ.
ದೋಷ ಪರಿಹಾರ : ದುರ್ಗಾ ದೇವಸ್ಥಾನಕ್ಕೆ ಹೂ ಸಮರ್ಪಣೆ ಮಾಡಿ
ತುಲಾ : ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತೀರಿ, ನಿಮ್ಮ ಮಾತು ಉತ್ಕೃಷ್ಟ ಫಲ ತರಲಿದೆ, ಮಾತುಗಾರರಿಗೆ, ಕವಿಗಳಿಗೆ, ಬರಹಗಾರರಿಗೆ ವಿವಿಧ ಮೂಲದ ಆದಾಯ ಬರಲಿದೆ, ಬಟ್ಟೆ ವ್ಯಾಪಾರಿಗಳಿಗೆ ಧನ ಸಮೃದ್ಧಿ.
ದೋಷ ಪರಿಹಾರ : ಶ್ರೀಸೂಕ್ತ ಪಠಿಸಿ.
ವೃಶ್ಚಿಕ : ಲೋಹ ವ್ಯಾಪಾರಿಗಳಿಗೆ, ಬಂಗಾರ ತಯಾರಕರಿಗೆ ಲಾಭದ ದಿನ, ಗೃಹ ಸೌಖ್ಯ, ವಾಹನ ಖರೀದಿ, ನಿಮ್ಮಸೇವಕರಿಂದ ಸಹಾಯವಾಗುವ ದಿನ, ಮನೆ ಕೆಲಸದವರ ಜೊತೆ ಕಲಹ, ಸಣ್ಣ ಪುಟ್ಟ ಅವಘಡ. ಎಚ್ಚರವಿರಲಿ.
ದೋಷ ಪರಿಹಾರ : ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ
ಧನಸ್ಸು : ನಿಮ್ಮ ಮನಸ್ಸಿಗೆ ಅಸಮಾಧಾನ, ಅತ್ಯುತ್ತಮರ ಭೇಟಿ, ಸ್ತ್ರೀಯರಿಂದಾಗಿ ಕಲಹ ಪ್ರಾಪ್ತಿ, ದಾಂಪತ್ಯದಲ್ಲಿ ಕಲಹ, ಆದರೆ ಸಹಕಾರವೂ ಇದೆ, ಮಕ್ಕಳಿಂದ ನಿಮ್ಮ ಕಾರ್ಯ ನೆರವೇರಲಿದೆ, ಉತ್ತಮರ ಭೇಟಿ.
ದೋಷ ಪರಿಹಾರ : ಕುಲ ದೇವರಿಗೆ ತುಪ್ಪದ ದೀಪ ಹಚ್ಚಿ
ಮಕರ : ಕಾರ್ಯಗಳಲ್ಲಿ ಜಯ ಹಾಗೂ ಲಾಭ ಸಿಗಲಿದೆ. ಉಗ್ರ ಸ್ವಭಾವ ಸ್ವಲ್ಪ ಶಾಂತವಾಗಲಿ. ನಿಮ್ಮ ಯೋಚನೆ ಸರಿ ಇರಬಹುದು ಆದರೂ ಅಭಿಪ್ರಾಯ ಹಂಚಿಕೆಯಾಗುವಾಗ ಸ್ವಲ್ಪ ಸಮಾಧಾನವಿರಲಿ.
ದೋಷ ಪರಿಹಾರ : ಶಿವ ಸ್ತೋತ್ರ ಪಠಿಸಿ
ಕುಂಭ : ಉತ್ತಮ ದಿನವಾಗಿರಲಿದೆ, ತಂದೆಯಿಂದ ಸಹಕಾರ, ಮಾಡುವ ಕಾರ್ಯದಲ್ಲಿ ಜಯ, ನಿಮ್ಮ ಬಂಧುಗಳ ಸಹಕಾರ ದೊರೆಯಲಿದೆ, ಆದರೆ ಕಟು ಮಾತುಗಳನ್ನೂ ಕೇಳಬೇಕಾಗುತ್ತದೆ. ಎಚ್ಚರವಾಗಿರುವುದು ಒಳಿತು.
ದೋಷ ಪರಿಹಾರ : ನಾರಾಯಣ ಸ್ಮರಣೆ ಮಾಡಿ
ಮೀನ : ಉದ್ಯೋಗದಲ್ಲಿ, ವ್ಯಾಪಾರದಲ್ಲಿ ಲಾಭದ ದಿನ, ನಿಮ್ಮ ಅನುಕೂಲಕ್ಕೆ ಕಾರ್ಯ ಸಿದ್ಧಿಸುತ್ತದೆ, ಪ್ರಯಾಣ ಸುಖಕರವಾಗಿರಲಿದೆ, ಉತ್ತಮರ ಸಹವಾಸ ಒದಗಲಿದೆ, ಮಂಗಲ ಕಾರ್ಯ ಯೋಜನೆ.
ದೋಷ ಪರಿಹಾರ : ದತ್ತಾತ್ರೇಯ ಸ್ಮರಣೆ ಮಾಡಿ