‘ಒಂದ್ ಕಥೆ ಹೇಳ್ಲಾ’ ಮೆಚ್ಚಿದ ‘ಕೆಜಿಎಫ್’ ನಿರ್ದೇಶಕ!
ಕನ್ನಡ ಚಿತ್ರರಂಗದಲ್ಲಿ ಬೆಚ್ಚಿ ಬೆರಗಾಗಿಸುವ ಹಾರರ್ ಸಿನಿಮಾ 'ಒಂದ್ ಕಥೆ ಹೇಳ್ಲಾ' ಗೆ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹಾರರ್ ಆ್ಯಂಥಾಲಜಿ ‘ಒಂದ್ ಕಥೆ ಹೇಳ್ಲಾ’ ಚಿತ್ರ ಚಂದನವನದಲ್ಲಿ ಸಖತ್ ಸದ್ದು ಮಾಡುತ್ತಿದ್ದು ಎಲ್ಲೆಡೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ನಾಲ್ಕು ಉಪಕತೆಗಳುಳ್ಳ ಒಂದು ಕುತೂಹಲಕಾರಿ ಕಥೆ ಇದಾಗಿದ್ದು, ಮನೆಯಲ್ಲಿದ್ದ ಸಂಪ್ ಕ್ಲೀನ್ ಮಾಡಲು ಹೋದಾಗ ತನ್ನಿಂತಾನೇ ಮುಚ್ಚಿಕೊಳ್ಳುತ್ತದೆ ಅ ವೇಳೆ ಆಗುವ ಉದ್ವೇಗ, ಆತಂಕ, ಅಯ್ಯೋ ಅನ್ನಿಸುವ ಭಾವ ಸೇರಿ ಕತೆಯೇ ಈ ಚಿತ್ರ.
ಇನ್ನು ಈ ಸಿನಿಮಾ ನೋಡಿ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಫುಲ್ ಫಿದಾ ಆಗಿದ್ದಾರೆ. ನಟಿ ಕೃಷಿ ತಾಪಂಡ ಹಾಗೂ ನಟ ಡಾಲಿ ಧನಂಜಯ್ ಕೂಡಾ ಈ ಚಿತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಂದ್ ಕಥೆ ಹೇಳ್ಲಾ ಸಿನಿಮಾದಲ್ಲಿ ಕಾಡುವ ಆ ’ಎನರ್ಜಿ’ ಯಾವುದು?