ರಶ್ಮಿ ಜೈಲಿಗೆ, ಆ್ಯಂಡಿ-ಕವಿತಾ ಕಿತ್ತಾಟ, ಶಶಿ ಗುದ್ದಿದ್ದು ಯಾರಿಗೆ?
ಬಿಗ್ ಬಾಸ್ ಮನೆಯಲ್ಲಿ ಬೆಂಕಿ ತುಂಬಿಕೊಂಡಿದೆ. ಒಂದು ಕಡೆ ಪ್ರೇಮ ಕತೆ, ಇನ್ನೊಂದು ಕಡೆ ಜೈಲುವಾಸ, ಒಂದು ಕಡೆ ಮಹಿಳೆಯರ ಬಗ್ಗೆ ಹಾಡು.. ಅಸಮಾಧಾನ,, ಕಣ್ಣೀರು..ಕ್ಯಾಪ್ಟನ್ ಆಯ್ಕೆ
ಗಂಡು ಹಣ್ಣು, ಹೆಣ್ಣು ಹಂಡು ಟಾಸ್ಕ್ ನಲ್ಲಿ ಕಳಪೆ ಪ್ರದರ್ಶನ ನೀಡಿದವರು ಎಂದು ತೀರ್ಮಾನಕ್ಕೆ ಗುರಿಯಾದ ರಶ್ಮಿ ಮತ್ತು ಆನಂದ ಜೈಲು ಸೇರಿದ್ದಾರೆ. ನಾಮಿಮೇಶನ್ ನಿಂದ ಹೊರಗುಳೀಯಲು ಆ್ಯಂಡಿ ಕವಿತಾ ಬಳಿ ಪ್ರತಿ ದಿನ 10 ನಿಮಿಷಕ್ಕೆ ಬೇಡಿಕೆ ಇಟ್ಟಿದ್ದು ಮನೆಯಲ್ಲಿ ಗುಂಪು ನಿರ್ಮಾಣಕ್ಕೆ ಬೆಂಕಿ ಹಚ್ಚಲು ಕಾರಣವಾಗಿದೆ.
ಕಾಫಿ ವಿಥ್ ಅಕ್ಷತಾ ಕಾರ್ಯಕ್ರಮದಲ್ಲಿಯೂ ಕೆಲವು ಪ್ರಶ್ನೆಗಳಿಗೆ ಕವಿತಾ ಹೆಸರೇ ಉತ್ತರವಾಗಿ ಬಂದಿದ್ದು ಮನೆಯವರನ್ನು ಕೆರಳಿಸಿತು. ಆದರೆ ಆಂಡಿ ಮತ್ತು ಕವಿತಾ ನಡುವಿನ ಡೀಲ್ ವಿಚಾರ ಮಾತ್ರ ಮನೆಯಲ್ಲಿ ಬಿಸಿ ಹೆಚ್ಚು ಮಾಡಿದೆ.
ಒಂದು ಕಡೆ ಶನಿವಾರದ ಎಲಿಮನೇಶನ್ ಬಿಸಿ ಒಂದು ಕಡೆ ಉಂಟಾಗಿದ್ದರೆ ಇನ್ನೊಂದು ಕಡೆ ಮನೆಯ ವಾತಾವರಣವನ್ನು ಯಾರು ನಿಯಂತ್ರಿಸಲಾಗದ ಸ್ಥಿತಿಗೆ ಬಂದಿದೆ..