ಮನೆ ಮಂದಿಗೆ ಬಿಗ್ ಶಾಕ್ ಕೊಟ್ಟ ಆ 3 ಸುದ್ದಿಗಳು!
ಬಿಗ್ ಬಾಸ್ ಮನೆ ಶನಿವಾರದ ಎಪಿಸೋಡ್ನಲ್ಲಿ ಅಕ್ಷರಶಃ ಶಾಕ್ಗೆ ಒಳಗಾಗಿತ್ತು. ಇಡೀ ಕರ್ನಾಟಕ ಅನುಭವಿಸಿದ ಆಘಾತವನ್ನು ಮನೆ ಒಂದೆರಡು ದಿನಗಳ ನಂತರ ಅನುಭವಿಸಿತು. ಅಂಬರೀಶ್ ನಿಧನದ ಸುದ್ದಿಯನ್ನು ಅರಗಿಸಿಕೊಳ್ಳಲು ಮನೆ ಸಂಕಟ ಪಡುತ್ತಿದೆ.
ಬಿಗ್ ಬಾಸ್ ಮನೆ ಮಂದಿ ಈ ರೀತಿ ಶಾಕ್ ತೆಗೆದುಕೊಳ್ಳುವುದು ಇದೇ ಮೊದಲೇನಲ್ಲ. ನಿಯಮದಂತೆ ಹೊರಗಿನ ವಿಚಾರಗಳು ಒಳಗಿನ ಮನೆ ಮಂದಿಗೆ ಗೊತ್ತಾಗಬಾರದು. ಅವರ ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆ ಎಂಬ ಮಾತು ಇದೆ. ಆದರೆ ಕೆಲವೊಂದು ವಿಚಾರಗಳನ್ನು ಬಿಗ್ಬಾಸ್ ತಾವೆ ಮುಂದಾಗಿ ಹೇಳುತ್ತಾರೆ.
ನೋಟ್ ಬ್ಯಾನ್: ಸೀನನ್ 4 ರ ವೇಳೆ ಡಿ ಮಾನಿಟೈಜೇಶನ್ ಮಾಡಲಾಗಿತ್ತು. ನವೆಂಬರ್ 8 ರಂದು ನಡೆದ ಕಾರ್ಯದ ನಂತರ ದೇಶದ ಅರ್ಥ ವ್ಯವಸ್ಥೆಯಲ್ಲಿ ಅಲ್ಲೋಲ ಕಲ್ಲೋಲ ಆಗಿತ್ತು. ಈ ವೇಳೆ ಒಂದು ವಾರದ ನಂತರ ಸ್ಪರ್ಧಿಗಳಿಗೆ ನೋಟ್ ಬ್ಯಾನ್ ವಿಚಾರ ತಿಳಿಸಲಾಘಿತ್ತು. ಮನೆಯಲ್ಲಿದ್ದ ಸಂಜನಾ ಅವರಿಗೆ ಸುದೀಪ್ ಸಾವಿರ ರೂ. ನೋಟುಗಳಲ್ಲೇ ನೀವು ಗೆದ್ದರೆ ಹಣ ನೀಡುತ್ತೇನೆ ಎಂದು ಕಾಲೆಳೆದಿದ್ದರು.
ಜಯಲಲಿತಾ ನಿಧನ: ತಮಿಳುನಾಡಿನಲ್ಲಿ ಅಮ್ಮನಾಗಿ ಮೆರೆದ ಜಯಲಲಿತಾ ನಿಧನರಾದ ಸುದ್ದಿಯನ್ನು ಮನೆ ಮಂದಿಗೆ ತಿಳಿಸಲಾಗಿತ್ತು. ಚಂದನ್ ಶೆಟ್ಟಿ ಜಯಗಳಿಸಿದ ಆ ಬಿಗ್ಬಾಸ್ನಲ್ಲಿ ಸ್ಪರ್ಧಿಗಳು ಆಘಾತ ಅನುಭವಿಸಿದ್ದರು.
ಅಂಬಿ ನಿಧನ: ಅಂಬರೀಶ್ ನಿಧನದ ಸುದ್ದಿಯನ್ನು ಈ ಬಾರಿಯ ಬಿಗ್ ಬಾಸ್ ಮನೆಗೆ ತಿಳಿಸಲಾಗಿದೆ. ಮನೆ ಮಂದಿ ಭಾನುವಾರದ ಸಂಚಿಕೆಯಲ್ಲಿ ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.