ಪ್ರಜ್ಞಾ ಬಳಿ ಸದಾ ಚಾಕು ಇರುತ್ತೆ: ಸಿಎಂ ಬಘೇಲ್
ಪ್ರಜ್ಞಾ ಬಳಿ ಸದಾ ಚಾಕು ಇರುತ್ತೆ, ಹಿಂದೊಮ್ಮೆ ದಾಳಿ ನಡೆಸಿದ್ದರು ಎಂದು ಛತ್ತೀಸ್ಗಡ ಸಿಎಂ ಬಘೇಲ್ ಆರೋಪಿಸಿದ್ದಾರೆ.
ಜಬಲ್ಪುರ[ಏ.26]: ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್ ಠಾಕೂರ್ರನ್ನು ಸಾಧ್ವಿ ಎಂದು ಕರೆಯುವುದಕ್ಕೆ ಛತ್ತೀಸ್ಗಢ ಸಿಎಂ ಭೂಪೇಶ್ ಬಘೇಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಾಧ್ವಿ ಹೆಲ್ತ್ ಮಿನಿಸ್ಟರ್ ಅಭ್ಯರ್ಥಿ: ಒವೈಸಿ ವ್ಯಂಗ್ಯವಾಡಿದ್ದೇಕೆ!
ಆಕೆ ಸಾಧ್ವಿ ಎನ್ನಿಸಿಕೊಳ್ಳುವ ವ್ಯಕ್ತಿ ಹೊಂದಿಲ್ಲ. ಆಕೆಯ ಬಳಿ ಸದಾ ಚಾಕು ಇರುತ್ತದೆ. ಈ ಹಿಂದೊಮ್ಮೆ ಆಕೆ ಯುವಕನಿಗೆ ಚಾಕುವಿನಿಂದ ಇರಿದಿದ್ದಳು. ಮೊದಲಿನಿಂದಲೂ ಆಕೆ ಜಗಳದ ಸ್ವಭಾಘ, ಅಪರಾಧಿಕ ಮನೋಭಾವ ಹೊಂದಿದ್ದಾಳೆ ಎಂದು ಟೀಕಿಸಿದ್ದಾರೆ.
ಸಾಧ್ವಿ ಪ್ರಜ್ಞಾಗೆ ಸಿಂಗ್ ಬಾಯಿಗೆ ಬಿಜೆಪಿ ಬೀಗ!
ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ಕಾಂಗ್ರೆಸ್ ಮುಖಂಡರು ಅರ್ಥಹೀನ ಮಾತುಗಳಿಂದ ದೂರವಿರಬೇಕು. ಈ ಕುರಿತು ದಾಖಲೆಗಳಿಲ್ಲದೇ ಮಾತನಾಡಿದರೆ ಮಾನನಷ್ಟಮೊಕದ್ದಮೆ ಎದುರಿಸಬೇಕಾದೀತು ಎಂದು ಎಚ್ಚರಿಸಿದ್ದಾರೆ.