ಚುನಾವಣಾಧಿಕಾರಿಯನ್ನೇ ಗುಂಡಿಟ್ಟು ಕೊಂದ ನಕ್ಸಲೀಯರು!
ಚುನಾವಣೆ ಮಧ್ಯೆ ಅಟ್ಟಹಾಸ ಮೆರೆದ ನಕ್ಸಲರು| ಚುನಾವಣಾಧಿಕಾರಿಯನ್ನೇ ಗುಂಡಿಟ್ಟು ಕೊಂದ ನಕ್ಸಲರು| ಮಹಿಳಾ ಚುನಾವಣಾಧಿಕಾರಿಯನ್ನು ಗುಂಡಿಟ್ಟು ಹತ್ಯೆ ಮಾಡಿದ ನಕ್ಸಲರು| ಒಡಿಶಾದ ಕಂದಮಾಲ್ ಜಿಲ್ಲೆಯ ಗೋಚಪಡಾದಲ್ಲಿ ಘಟನೆ| ಚುನಾವಣಾ ಅಧಿಕಾರಿಯ ವಾಹನಕ್ಕೆ ಬೆಂಕಿ ಹಚ್ಚಿ ಗುಂಡಿಕ್ಕಿದ ದುರುಳರು|
ಭುವನೇಶ್ವರ್(ಏ.18): ದೇಶ ಎರಡನೇ ಹಂತದ ಮತದಾನಕ್ಕೆ ಮುನ್ನುಡಿ ಬರೆದಿರುವ ಮಧ್ಯೆಯೇ, ಒಡಿಶಾದಲ್ಲಿ ನಕ್ಸಲರು ಮಹಿಳಾ ಚುನಾವಣಾ ಅಧಿಕಾರಿಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
ಒಡಿಶಾದ ಕಂದಮಾಲ್ ಜಿಲ್ಲೆಯ ಗೋಚಪಡಾದಲ್ಲಿ ಚುನಾವಣಾ ಕರ್ತವ್ಯಕ್ಕೆ ತೆರಳಿದ್ದ ಮಹಿಳಾ ಅಧಿಕಾರಿಯನ್ನು, ನಕ್ಸಲೀಯರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
Odisha: Maoists kill polling official, torch vehicles ahead of 2nd phase of LS polls
— ANI Digital (@ani_digital) April 17, 2019
Read @ANI Story | https://t.co/xhr0C0TfVw pic.twitter.com/aS470d4elI
ಚುನಾವಣಾ ಮತಗಟ್ಟೆಗೆ ತೆರಳುತ್ತಿದ್ದ ವೇಳೆ ಅಧಿಕಾರಿಯ ವಾಹನವನ್ನು ಅಡ್ಡಗಟ್ಟಿದ ಬಂದೂಕುದಾರಿ ನಕ್ಸಲರು, ವಾಹನಕ್ಕೆ ಬೆಂಕಿ ಹಚ್ಚಿ ಅಧಿಕಾರಿಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
ಲೋಕಸಭೆ ಚುನಾವಣೆಯನ್ನು ನಕ್ಸಲರು ಬಹಿಷ್ಕರಿಸಿದ್ದು, ಕರಪತ್ರ ಬ್ಯಾನರ್ ಗಳನ್ನು ಅಂಟಿಸಿ ಚುನಾವಣೆಯನ್ನು ಬಹಿಷ್ಕರಿಸುವಂತೆ ಜನತೆಗೆ ಕರೆ ನೀಡಿದ್ದಾರೆ.