Asianet Suvarna News Asianet Suvarna News

ಚುನಾವಣೆ ಬೆನ್ನಲ್ಲೇ ಮಂಡ್ಯದಲ್ಲಿ ಹೊಸ ದಂಧೆ : ಎಸ್ಪಿ ಖಡಕ್ ವಾರ್ನಿಂಗ್

ಲೋಕಸಭಾ ಚುನಾವಣೆ ಬೆನ್ನಲ್ಲೇ ಇದೀಗ ಮಂಡ್ಯದಲ್ಲಿ ಹೊಸ ದಂಧೆಯೊಂದು ಶುರುವಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸರು ಖಡಕ್ ವಾರ್ನಿಂಗ್ ನೀಡಿದ್ದಾರೆ. 

Mandya SP warns Against Betting over Lok Sabha Elections 2019
Author
Bengaluru, First Published Apr 27, 2019, 4:33 PM IST

ಮಂಡ್ಯ : ಮಂಡ್ಯದಲ್ಲಿ ಲೋಕಸಭಾ ಚುನಾವಣೆ ಮುಕ್ತಾಯವಾಗುತ್ತಿದ್ದಂತೆ  ಇದೀಗ ಹೊಸ ದಂಧೆಯೊಂದು ಶುರುವಾಗಿದೆ. 

ಚುನಾವಣೆ ಅಭ್ಯರ್ಥಿಗಳ ಸೋಲು ಗೆಲುವಿನ ಮೇಲೆ ಬೆಟ್ಟಿಂಗ್ ದಂಧೆ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಖಡಕ್ ವಾರ್ನಿಂಗ್ ನೀಡಿದೆ. 

ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಲು ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಿದ್ದು, 

ಬೆಟ್ಟಿಂಗ್ ಆಡುವವರ ಮೇಲೆ ನಿಗಾ ವಹಿಸಲಾಗಿದೆ ಎಂದು ಮಂಡ್ಯ ಎಸ್ಪಿ ಶಿವಪ್ರಕಾಶ್ ದೇವರಾಜ್ ಹೇಳಿದ್ದಾರೆ. 

ಬೆಟ್ಟಿಂಗ್ ದಂಧೆ ಮಾಡುವವರನ್ನ ಟ್ರೇಸ್ ಮಾಡಲು ನಮ್ಮ ಸಿಬ್ವಂದಿ ಕಾರ್ಯಾಚರಣೆ ಮಾಡುತ್ತಿದ್ದಾರೆ. 

ಸೋಷಿಯಲ್ ಮೀಡಿಯಾದಲ್ಲಿನ ಬೆಟ್ಟಿಂಗ್ ದಂಧೆ ಮೇಲೆ ಕಣ್ಣಿಟ್ಟಿದ್ದೇವೆ. ಇದಕ್ಕಾಗಿ ತಂಡವನ್ನು ರಚಿಸಿದ್ದೇವೆ. 

ಯಾರು ಕೂಡ ಈ ರಾಜಕೀಯ  ಬೆಟ್ಟಿಂಗ್ ಆಡಬಾರದು. ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಾರ್ನಿಂಗ್ ಮಾಡಿದ್ದಾರೆ.

Follow Us:
Download App:
  • android
  • ios