ಧಾರವಾಡ: ಎರಡು ಬಸ್ಸುಗಳ ಮಧ್ಯೆ ಸಿಲುಕಿದ ಗೂಡ್ಸ್ ವಾಹನ
ಗೂಡ್ಸ್ ವಾಹನದ ಚಾಲಕ ಎರಡು ಬಸ್ಸುಗಳ ಮಧ್ಯೆ ಸಿಲುಕಿ ಸುಮಾರು ಅರ್ಧ ಗಂಟೆ ಕಾಲ ನರಳಾಡಿದ್ದಾನೆ| ಎರಡೂ ಬಸ್ಸುಗಳ ಮಧ್ಯೆ ಸಿಕ್ಕು ಅಪ್ಪಚ್ಚಿಯಾದ ಗೂಡ್ಸ್ ವಾಹನದ ಚಾಲಕ ಲೋಹಿತ ಲಕ್ಕುಂಡಿಮಠ (28) ಎಂಬಾತನನ್ನು ಸ್ಥಳೀಯರ ಸಹಕಾರದಿಂದ ಟ್ರಾಫಿಕ್ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯಂದ ರಕ್ಷಣೆ| ಆತನಿಗೆ ಗಂಭೀರ ಗಾಯವಾಗಿಲ್ಲ| ಲೋಹಿತ ಸದ್ಯ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ|
ಧಾರವಾಡ(ಅ.18): ಆಕಸ್ಮಿಕ ಸಂದರ್ಭದಲ್ಲಿ ಗೂಡ್ಸ್ ವಾಹನವೊಂದರ ಚಾಲಕ ಎರಡು ಬಸ್ಸುಗಳ ಮಧ್ಯೆ ಸಿಲುಕಿ ಸುಮಾರು ಅರ್ಧ ಗಂಟೆ ಕಾಲ ನರಳಾಡಿದ ಘಟನೆ ನಗರದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ಎರಡೂ ಬಸ್ಸುಗಳ ಮಧ್ಯೆ ಸಿಕ್ಕು ಅಪ್ಪಚ್ಚಿಯಾದ ಗೂಡ್ಸ್ ವಾಹನದ ಚಾಲಕ ಹುಬ್ಬಳ್ಳಿ ಮಂಗಳವಾರ ಪೇಟ್ನ ಲೋಹಿತ ಲಕ್ಕುಂಡಿಮಠ (28) ಎಂಬಾತನನ್ನು ಸ್ಥಳೀಯರ ಸಹಕಾರದಿಂದ ಟ್ರಾಫಿಕ್ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದು, ಅದೃಷ್ಟವಶಾತ್ ಆತನಿಗೆ ಗಂಭೀರ ಗಾಯವಾಗಿಲ್ಲ. ಲೋಹಿತ ಸದ್ಯ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೇಗಾಯ್ತು ಘಟನೆ
ಇಲ್ಲಿನ ಕಲಾಭವನದ ಮುಂದೆ ನಿತ್ಯ ದಟ್ಟವಾದ ಟ್ರಾಫಿಕ್ ಉಂಟಾಗುತ್ತದೆ. ಒಂದು ವಾಹನಗಳ ಹಿಂದೆ ಒಂದು ಸಾಲು ಹಚ್ಚುವುದು ಸಾಮಾನ್ಯ. ಅಂತೆಯೇ, ಗುರುವಾರ ಸಹ ಬಸ್ಸಿನ ಹಿಂದೆ ಗೂಡ್ಸ್ ವಾಹನ ಹೋಗುವಾಗ ಬಸ್ಸಿನ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದಾನೆ. ಗೂಡ್ಸ್ ವಾಹನದ ಹಿಂದೆಯೇ ಬಸ್ಸು ಇದ್ದ ಕಾರಣ ಎರಡು ಬಸ್ಸುಗಳ ಮಧ್ಯೆ ಗೂಡ್ಸ್ ವಾಹನ ಸಿಕ್ಕು ಅಪ್ಪಚ್ಚಿಯಾಗಿದೆ. ಕೂಡಲೇ ಹಿಂದೆ-ಮುಂದಿನ ಎರಡೂ ಬಸ್ಸುಗಳನ್ನು ತೆರವುಗೊಳಿಸಿದರೂ ಗೂಡ್ಸ್ ವಾಹನದಲ್ಲಿಯೇ ಚಾಲಕ ಲೋಹಿತ ಸಿಕ್ಕುಹಾಕಿಕೊಂಡಿದ್ದನು. ಕಾಲು, ಮೂಗು ಹಾಗೂ ಬಾಯಿಗೆ ಪೆಟ್ಟಾಗಿತ್ತು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಘಟನೆ ನಡೆದ ಕೂಡಲೇ ಕಲಾಭವನ ವೃತ್ತದಲ್ಲಿದ್ದ ಟ್ರಾಫಿಕ್ ಪೊಲೀಸರು ರಸ್ತೆ ಬಂದ್ ಮಾಡಿ ವಾಹನದಲ್ಲಿ ಸಿಲುಕಿದ ಲೋಹಿತ್ನನ್ನು ಹೊರ ತೆಗೆಯುವ ಕಾರ್ಯಾಚರಣೆ ನಡೆಸಿದರು. ಸುಮಾರು ಹೊತ್ತು ಕೈಯಿಂದಲೇ ಪ್ರಯತ್ನ ನಡೆಸಿದರೂ ಫಲಕಾರಿ ಆಗಲಿಲ್ಲ. ಕೊನೆಗೆ ಮೆಟಲ್ ಕಟರ್ ಬಳಸಿ ವಾಹನದಲ್ಲಿ ಸಿಲುಕಿದ ಚಾಲಕನನ್ನು ಸುರಕ್ಷಿತವಾಗಿ ಹೊರ ತೆಗೆಯಲಾಯಿತು. ಈ ಸಂಬಂಧ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.