Asianet Suvarna News Asianet Suvarna News

ವಿಜಯ್‌ ಹಜಾರೆ ಟೂರ್ನಿ 2019: ಫೈನಲ್’ಗೆ ಲಗ್ಗೆಯಿಟ್ಟ ಕರ್ನಾಟಕ

ಮನೀಶ್ ಪಾಂಡೆ ನೇತೃತ್ವದ ಕರ್ನಾಟಕ ತಂಡ 2019ರ ವಿಜಯ್ ಹಜಾರೆ ಟೂರ್ನಿಯಲ್ಲಿ ಫೈನಲ್’ಗೆ ಲಗ್ಗೆಯಿಟ್ಟಿದೆ. ಅಕ್ಟೋಬರ್ 26ರಂದು ಬೆಂಗಳೂರಿನಲ್ಲೇ ನಡೆಯಲಿರುವ ಫೈನಲ್’ನಲ್ಲಿ ಪ್ರಶಸ್ತಿಗಾಗಿ ತಮಿಳುನಾಡು ತಂಡದ ಜತೆ ಕರ್ನಾಟಕ ಕಾದಾಡಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Vijay Hazare Trophy 2019 Manish Pandey led Karnataka to face Tamil Nadu in final
Author
Bengaluru, First Published Oct 24, 2019, 9:24 AM IST

"

ಬೆಂಗ​ಳೂ​ರು[ಅ.24]: 2019ರ ವಿಜಯ್‌ ಹಜಾರೆ ಏಕ​ದಿನ ಟೂರ್ನಿಯ ಫೈನಲ್‌ಗೆ ಕರ್ನಾ​ಟಕ ತಂಡ ಲಗ್ಗೆಯಿಟ್ಟಿದೆ. 3 ಬಾರಿಯ ಚಾಂಪಿ​ಯನ್‌ ಕರ್ನಾ​ಟಕ, 4ನೇ ಬಾರಿಗೆ ಫೈನಲ್‌ ಪ್ರವೇ​ಶಿ​ಸಿದ್ದು ಪ್ರಶಸ್ತಿ ಗೆಲ್ಲಲು ಉತ್ಸಾಹದಲ್ಲಿದೆ. ಬುಧ​ವಾರ ಇಲ್ಲಿನ ಚಿನ್ನ​ಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸೆಮಿ​ಫೈ​ನಲ್‌ ಪಂದ್ಯ​ದಲ್ಲಿ ಛತ್ತೀಸ್‌ಗಢ ವಿರುದ್ಧ ರಾಜ್ಯ ತಂಡ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿ​ಸಿತು.

ಮೊದ​ಲು ಬ್ಯಾಟ್‌ ಮಾಡಿದ ಛತ್ತೀಸ್‌ಗಢವನ್ನು 49.4 ಓವರ್‌ಗಳಲ್ಲಿ 223 ರನ್‌ಗಳಿಗೆ ಆಲೌಟ್‌ ಮಾಡಿದ ಕರ್ನಾ​ಟಕ, ಅಗ್ರ ಮೂರು ಬ್ಯಾಟ್ಸ್‌ಮನ್‌ಗಳ ಆಕ​ರ್ಷಕ ಪ್ರದ​ರ್ಶ​ನದ ನೆರ​ವಿ​ನಿಂದ ಇನ್ನೂ 10 ಓವರ್‌ ಬಾಕಿ ಇರು​ವಂತೆಯೇ ಗೆಲು​ವಿನ ಸಂಭ್ರಮ ಆಚ​ರಿ​ಸಿತು.

ಸುಲಭ ಗುರಿ ಬೆನ್ನ​ತ್ತಿದ ಕರ್ನಾ​ಟ​ಕಕ್ಕೆ ಕೆ.ಎಲ್‌.ರಾ​ಹುಲ್‌ ಹಾಗೂ ದೇವ​ದತ್‌ ಪಡಿ​ಕ್ಕಲ್‌ ಭರ್ಜರಿ ಆರಂಭ ನೀಡಿ​ದರು. ಈ ಇಬ್ಬರು ಮೊದಲ ವಿಕೆಟ್‌ಗೆ 30.5 ಓವರ್‌ಗಳಲ್ಲಿ 155 ರನ್‌ ಜೊತೆ​ಯಾಟವಾಡಿ​ದರು. ಅಮೋಘ ಲಯ​ದ​ಲ್ಲಿ​ರುವ ದೇವ​ದತ್‌ 98 ಎಸೆ​ತ​ಗ​ಳಲ್ಲಿ 7 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 92 ರನ್‌ ಗಳಿಸಿ ಔಟಾ​ಗುವ ಮೂಲಕ, ಟೂರ್ನಿ​ಯಲ್ಲಿ 3ನೇ ಶತ​ಕ​ದಿಂದ ವಂಚಿತರಾ​ದರು.

ಇಂದು ಕರ್ನಾ​ಟ​ಕ-ಛತ್ತೀಸ್‌ಗಢ ಸೆಮೀ​ಸ್‌; ರಾಜ್ಯಕ್ಕೆ ಮಯಾಂಕ್ ಬಲ!

ಮಂಗ​ಳ​ವಾರವಷ್ಟೇ ದ.ಆ​ಫ್ರಿಕಾ ವಿರುದ್ಧ 3ನೇ ಟೆಸ್ಟ್‌ ಮುಗಿಸಿ, ಸಂಜೆ ಬೆಂಗ​ಳೂ​ರಿಗೆ ಆಗ​ಮಿ​ಸಿದ್ದ ಮಯಾಂಕ್‌ ಅಗರ್‌ವಾಲ್‌ 3ನೇ ಕ್ರಮಾಂಕ​ದಲ್ಲಿ ಕ್ರೀಸ್‌ಗಿಳಿ​ದರು. ರಾಹುಲ್‌ ಜತೆ ಸೇರಿ ತಂಡವನ್ನು ಗೆಲು​ವಿನ ದಡ ಮುಟ್ಟಿ​ಸಿ​ದರು. 33 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್‌ಗಳೊಂದಿಗೆ 47 ರನ್‌ ಗಳಿಸಿ ಮಯಾಂಕ್‌ ಅಜೇ​ಯ​ವಾಗಿ ಉಳಿ​ದರು. ಸಿಕ್ಸರ್‌ ಮೂಲಕ ಪಂದ್ಯ ಮುಕ್ತಾ​ಯ​ಗೊ​ಳಿ​ಸಿದ ರಾಹುಲ್‌, 111 ಎಸೆ​ತ​ಗ​ಳಲ್ಲಿ 6 ಬೌಂಡರಿ, 1 ಸಿಕ್ಸರ್‌ನೊಂದಿಗೆ 88 ರನ್‌ ಗಳಿಸಿ ಔಟಾ​ಗದೆ ಉಳಿ​ದರು.

ಕೌಶಿಕ್‌ಗೆ 4 ವಿಕೆಟ್‌: ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿ​ಕೊಂಡ ಕರ್ನಾ​ಟಕ, ಛತ್ತೀಸ್‌ಗಢಕ್ಕೆ ಆರಂಭಿಕ ಆಘಾತ ನೀಡಿತು. ವಿ.ಕೌ​ಶಿಕ್‌ ಮಾರಕ ದಾಳಿಗೆ ಸಿಲು​ಕಿದ ಎದು​ರಾಳಿ ತಂಡ 35 ರನ್‌ಗೆ 3 ವಿಕೆಟ್‌ ಕಳೆ​ದು​ಕೊಂಡಿತು. ಅಮನ್‌ದೀಪ್‌ ಖಾರೆ (78) ಹಾಗೂ ಸುಮಿತ್‌ ರುಯ್ಕರ್‌ (40) ಹೋರಾ​ಟದ ನೆರ​ವಿ​ನಿಂದ ಛತ್ತೀಸ್‌ಗಢ 200 ರನ್‌ ಗಡಿ ದಾಟಿ, 223 ರನ್‌ಗಳಿಗೆ ಇನ್ನಿಂಗ್ಸ್‌ ಮುಕ್ತಾ​ಯ​ಗೊ​ಳಿ​ಸಿತು. ರಾಜ್ಯದ ಪರ ಕೌಶಿಕ್‌ 4, ಮಿಥುನ್‌, ಗೌತಮ್‌ ಹಾಗೂ ಪ್ರವೀಣ್‌ ದುಬೆ ತಲಾ 2 ವಿಕೆಟ್‌ ಕಿತ್ತರು.

ಸ್ಕೋರ್‌:

ಛತ್ತೀಸ್‌ಗಢ 49.4 ಓವ​ರಲ್ಲಿ 223/10 (ಅ​ಮನ್‌ದೀಪ್‌ 78, ಕೌಶಿಕ್‌ 4-46)
ಕರ್ನಾ​ಟಕ 40 ಓವ​ರಲ್ಲಿ 229/1 (ದೇ​ವದತ್‌ 92, ರಾಹುಲ್‌ 88, ಮಯಾಂಕ್‌ 47)

ನಾಳೆ ತಮಿ​ಳು​ನಾಡು ವಿರುದ್ಧ ಫೈನಲ್‌

2ನೇ ಸೆಮಿ​ಫೈ​ನಲ್‌ ಪಂದ್ಯ​ದಲ್ಲಿ ಗುಜ​ರಾತ್‌ ವಿರುದ್ಧ 5 ವಿಕೆಟ್‌ ಗೆಲುವು ಸಾಧಿ​ಸಿದ ತಮಿ​ಳು​ನಾಡು ತಂಡ​ವನ್ನು ಶುಕ್ರ​ವಾರ ಚಿನ್ನ​ಸ್ವಾಮಿ ಕ್ರೀಡಾಂಗಣದಲ್ಲಿ ನಡೆ​ಯ​ಲಿ​ರುವ ಫೈನಲ್‌ ಪಂದ್ಯ​ದಲ್ಲಿ ಕರ್ನಾ​ಟಕ ಎದು​ರಿ​ಸ​ಲಿದೆ. 
 

Follow Us:
Download App:
  • android
  • ios