ಒಳ್ಳೆ ದಿನಗಳು ಆರಂಭ, ಆದರೆ ಎಚ್ಚರಿಕೆ ಅಗತ್ಯ
ಒಳ್ಳೆ ದಿನಗಳು ಆರಂಭ, ಆದರೆ ಎಚ್ಚರಿಕೆ ಅಗತ್ಯ
ಒಳ್ಳೆ ದಿನಗಳು ಆರಂಭ, ಆದರೆ ಎಚ್ಚರಿಕೆ ಅಗತ್ಯ
20-11-18 - ಮಂಗಳವಾರ
ಶ್ರೀ ವಿಲಂಬಿ ನಾಮ ಸಂವತ್ಸರ
ದಕ್ಷಿಣಾಯನ
ಶರದೃತು
ಕಾರ್ತೀಕ ಮಾಸ
ಶುಕ್ಲ ಪಕ್ಷ
ದ್ವಾದಶಿ
ರೇವತಿ
ರಾಹುಕಾಲ - 09.12 ರಿಂದ 10.38
ಯಮಗಂಡ ಕಾಲ - 01.31 ರಿಂದ 02.57
ಗುಳಿಕ ಕಾಲ - 06.20 ರಿಂದ 07.46
ಮೇಷ ರಾಶಿ : ಕುಟುಂಬದ ಹೆಣ್ಣುಮಕ್ಕಳು ನಿಮಗೆ ಸಹಾಯಕರಾಗಿ ನಿಲ್ಲುತ್ತಾರೆ. ಉತ್ತಮ ದಿನವಿದೆ. ಶುಭವಾಗಲಿ. ಆದರೆ ಆತ್ಮೀಯರೇ ಸ್ವಲ್ಪ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಬಹುದು ಎಚ್ಚರಿಕೆವಾಗಿರಿ.
ದೋಷಪರಿಹಾರ : ದೇವಿ ದರ್ಶನ ಹಾಗೂ ಅರಿಸಿನ ಕುಂಕುಮ ಸಮರ್ಪಣೆ ಮಾಡಿಬನ್ನಿ.
ವೃಷಭ : ನಿಮ್ಮ ಮನಸ್ಸಿಗೆ ಇಂದು ಸ್ವಲ್ಪ ಘಾಸಿಯಾಗಲಿದೆ. ಸ್ವಲ್ಪ ಬೆಂಕಿ ಸ್ವಭಾವ ಮೂಡಲಿದೆ. ಮನೆಯಲ್ಲಿ ಸ್ವಲ್ಪ ಕಲಹದ ವಾತಾವರಣ, ಸ್ತ್ರೀಯರು ಇಂದು ಶಾಂತವಾಗಿದ್ದರೆ ಉತ್ತಮ. ಚಂದ್ರನ ಆರಾಧನೆ ಮಾಡಿ.
ದೋಷ ಪರಿಹಾರ : ಅನ್ನಪೂರ್ಣೇಶ್ವರಿಗೆ ಒಂದು ತಂಬಿಗೆಯಾಗುವಷ್ಟು ಹಾಲನ್ನು ಸಮರ್ಪಿಸಿ ಬನ್ನಿ.
ಮಿಥುನ : ನಿಮ್ಮ ಹಣ ವ್ಯಯ. ಆದರೆ ಆ ಹಣ ನಿಮ್ಮ ಅನುಕೂಲಕ್ಕಾಗಿಯೇ ಆಗಿರುತ್ತದೆ. ಅಂದಹಾಗೆ ಕುಟುಂಬದವರಲ್ಲಿ ಸ್ವಲ್ಪ ವಾಗ್ವಾದ ಏರ್ಪಡಬಹುದು ಎಚ್ಚರವಾಗಿರಿ. ಲಕ್ಷ್ಮೀ ಸಹಿತ ಶ್ರೀನಿವಾಸ ದರ್ಶನ ಮಾಡಿ
ದೋಷ ಪರಿಹಾರ : ಮುಕ್ತಿನಾಗ ಕ್ಷೇತ್ರ ದರ್ಶನ ಮಾಡಿ.
ಕಟಕ : ನಿಮ್ಮ ದಿನ ಪ್ರಾರಂಭವಾಗುವುದೇ ಲಾಭ ನಷ್ಟಗಳೊಂದಿಗೆ. ಇಂದು ನಿಮ್ಮ ಪಾಲಿಗೆ ಶುಭಾಶುಭ ಎರಡೂ ಇವೆ. ಸ್ತ್ರೀಯರಿಗಾಗಿ ಹಣ ವ್ಯಯ ಮಾಡುವ ಸಾಧ್ಯತೆ ಇದೆ. ತ್ರಿಕೋನದ ಗುರು ಶುಭ ಫಲವನ್ನು ತರಲಿದ್ದಾನೆ.
ದೋಷ ಪರಿಹಾರ : ಇಂದು ಅನ್ನಪೂರ್ಣೇಶ್ವರಿ ದರ್ಶನ ಮಾಡಿ
ಸಿಂಹ : ಇಂದು ದೇಹ ಸೌಖ್ಯ, ಮನೆಯಲ್ಲಿ ವಿರೋಧವಿದ್ದರೂ ನಿಮ್ಮ ಶ್ರಮದಿಂದ ಕಾರ್ಯ ಸಾಧನೆಯಾಗುತ್ತದೆ. ಸಹೋದರರು ನಿಮ್ಮ ಕಡೆನಿಲ್ಲುತ್ತಾರೆ. ಉದ್ಯೋಗದಲ್ಲಿ ವ್ಯಯ. ಕಿರಿಕಿರಿ ಅಥವಾ ಉದ್ಯೋಗದಲ್ಲೇ ಏರುಪೇರಾಗುವ ಸಾಧ್ಯತೆ ಇದೆ.
ದೋಷ ಪರಿಹಾರ : ಶಿವನ ಆರಾಧನೆ, ಬಿಲ್ವಪತ್ರೆ ಸಮರ್ಪಣೆ ಮಾಡಿ
ಕನ್ಯಾ : ಇಂದು ನಿಮ್ಮಿಂದಲೇ ನಿಮಗೆ ಲಾಭ ಅಂದರೆ ನಿಮ್ಮ ಶ್ರಮಕ್ಕೆ ದುಪ್ಪಟ್ಟು ಲಾಭ ಸಿಗಲಿದೆ. ನಿಮ್ಮ ಹತ್ತಿರವಲ್ಲದವರಿಂದ ನಿಮಗೆ ಸ್ವಲ್ಪ ನಷ್ಟವೂ ಇದೆ. ಆದರೆ ಒಳ್ಳೇದಿನವೇ ಇದೆ. ಹೆಚ್ಚು ಯೋಚಿಸುವ ಅಗತ್ಯವಿಲ್ಲ.
ದೋಷ ಪರಿಹಾರ : ವಿಷ್ಣು ಸಹಸ್ರನಾಮದ ಒಂದು ನಾಮ ಪಠಿಸಿದರೂ ಶುಭ ಫಲ.
ತುಲಾ : ನಿಮ್ಮ ಆರೋಗ್ಯದಲ್ಲಿ ವ್ಯತ್ಯಯ, ಶೀತ ಬಾಧೆ ಕಾಡಲಿದೆ. ಜಲ ಸಂಬಂಧಿ ಕಂಟಕ ನಿಮ್ಮನ್ನು ಗಾಬರಿಮಾಡಲಿದೆ. ನೀರಿನ ಬಗ್ಗೆ ಸ್ವಲ್ಪ ಎಚ್ಚರವಿರಲಿ. ಕುತ್ತಿಗೆ ಭಾಗದಲ್ಲಿ ಸ್ವಲ್ಪ ತೊಂದರೆಯಾಗುವ ಸಾಧ್ಯತೆ ಇದೆ. ಜಾಗ್ರತೆ ಇರಲಿ.
ದೋಷ ಪರಿಹಾರ : ಶನೈಶ್ಚರ ಆರಾಧನೆ ಮಾಡಿ
ವೃಶ್ಚಿಕ : ನಿಮ್ಮ ಸಂಗಾತಿ ನಮಗೆ ತುಂಬ ಅನುಕೂಲವನ್ನುಂಟುಮಾಡುತ್ತಾರೆ. ವ್ಯಾಪಾರದಲ್ಲೂ ನಿಮಗೆ ಸಹಕಾರ ಸಿಗಲಿದೆ. ಸ್ವಲ್ಪ ಹಣ ನಷ್ಟವಾದರೂ ಮಾನಸಿಕವಾಗಿ ಬೇರಸವಿರುವುದಿಲ್ಲ. ಮನೆ ದೇವರಿಗೆ ನಮಸ್ಕಾರ ಮಾಡಿ
ದೋಷ ಪರಿಹಾರ : ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ
ಧನಸ್ಸು : ಇಂದು ಸ್ತ್ರೀಯರಿಗೆ ಸಾಲ ಕೊಡುವ ಸಂದರ್ಭ ಒದಗಲಿದೆ. ಕೊಡಲಾಗದೆ ಬಿಡಲಾಗದೆ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಮಕ್ಕಳಿಂದ ಸಂತೋಷ, ಮಡದಿ ದೂರವಾಗುವ ಸಂಭವ, ಕೆಲವರಿಗೆ ತೀವ್ರವಾಗಿ ಮತ್ತು ಕೆಲವರಿಗೆ ಸಾಧಾರಣವಾದ ಅನುಭವವಾಗುತ್ತದೆ.
ದೋಷ ಪರಿಹಾರ : ಲಕ್ಷ್ಮೀನಾರಾಯಣ ಸ್ಮರಣೆ ಅಥವಾ ದರ್ಶನ ಮಾಡಿ
ಮಕರ : ವ್ಯಾಪಾರದಲ್ಲಿ ಎರಡು ಬಗೆಯ ನಷ್ಟ. ನಿಮ್ಮಲ್ಲಿ ಎರಡೆರಡು ಮನಸ್ಸು. ಯಾವುದೇ ನಿರ್ಧಾರ ಮಾಡಲಾಗದೆ ಗೊಂದಲ. ಹಿರಿಯರ ಸಲಹೆ ಪಡೆಯಿರಿ.
ದೋಷ ಪರಿಹಾರ : ದತ್ತಾತ್ರೇಯ ಸ್ಮರಣೆ ಮಾಡಿ
ಕುಂಭ : ನಿಮ್ಮ ಪಾಲಿಗೆ ಶುಭದಿನ, ತಾಯಿಯಿಂದ ಸಹಾಯ ಸಿಗಲಿದೆ, ಬಂಧುಗಳ ಆಗಮನ ಅಥವಾ ಬಂಧುಗಳಿಂದ ಸಹಾಯ ದೊರೆಯಲಿದೆ. ಮಾನಸಿಕ ಶಾಂತಿ ಆರೋಗ್ಯದಲ್ಲಿ ಸದೃಢತೆ ಇರುತ್ತದೆ. ಉತ್ತಮ ದಿನ.
ದೋಷ ಪರಿಹಾರ : ತಾಯಿಗೆ ನಮಸ್ಕಾರ ಮಾಡಿ.
ಮೀನ : ಇಂದು ಸಹೋದರಿಯರಿಂದ ಉತ್ತಮ ಸಹಕಾರ, ನಿಮ್ಮ ತಂದೆಯಿಂದ ಮನೆ ದೊರೆಯುವ ಸಾಧ್ಯತೆ, ಬುದ್ಧಿಗೆ ಸ್ವಲ್ಪ ಮಂಕುಕವಿಯುವ ಸಾಧ್ಯತೆ ಇದೆ. ಸೊಂಟ ಭಾಗದಲ್ಲಿ ಸ್ವಲ್ಪ ತೊಂದರೆಯಾಗಬಹುದು. ಎಚ್ಚರವಾಗಿರಿ.
ದೋಷ ಪರಿಹಾರ : ದುರ್ಗಾ ದರ್ಶನ ಮಾಡಿ
ವಾಞ್ಮಯೀ