ಈ ರಾಶಿಯವರಿಗೆ ಭಾರೀ ಧನ ಲಾಭವಾಗಲಿದೆ: ಉಳಿದ ರಾಶಿ ಹೇಗಿದೆ?
ಶುಭೋದಯ ಓದುಗರೇ, ಇಂದಿನ ನಿಮ್ಮ ರಾಶಿ ಫಲಗಳು ಹೀಗಿವೆ. ನಿಮ್ಮ ದಿನ ಆರಂಭಿಸುವ ಮುನ್ನ ರಾಶಿ ಫಲಗಳನ್ನು ನೋಡಿ ಬಿಡಿ.ಶುಭದಿನ.
ಮೇಷ ರಾಶಿ : ಇಂದು ನಿಮ್ಮ ಸಹೋದರಿಯಿಂದ ಶುಭದಾಯಕ ದಿನ, ನಿಮ್ಮ ಆತ್ಮಶಕ್ತಿ ವೃದ್ಧಿ, ಉತ್ಸಾಹ ಹೊಮ್ಮಲಿದೆ. ಆದರೆ ಹೃದಯ ಭಾಗದಲ್ಲಿ ತೊಂದರೆ ಕಾಣುತ್ತದೆ. ಹೊಸ ಕಾರ್ಯಗಳನ್ನು ಮಾಡುವ ಆಲೋಚನೆ ಪ್ರಾರಂಭವಾಗಲಿದೆ.
ದೋಷಪರಿಹಾರ : ಕೆಂಪು ವಸ್ತ್ರ ದಾನ ಮಾಡಿ.
ವೃಷಭ : ಇಂದು ನಿಮ್ಮ ಮಿತ್ರರಿಂದ ಹಾಗೂ ನಿಮ್ಮ ಮಾತಿನ ಚಾತುರ್ಯದಿಂದ ಧನ ಲಾಭ, ನಿಮ್ಮ ಗಂಟಲಿನ ಭಾಗದಲ್ಲಿ ಸ್ವಲ್ಪ ನೋವು ಇತ್ಯಾದಿ ತೊಂದರೆ ಕಾಣಿಸಿಕೊಳ್ಳಲಿದೆ, ಮಾನಸಿಕ ಖಿನ್ನತೆ ಕಾಡಲಿದೆ.
ದೋಷ ಪರಿಹಾರ : ಬಿಳಿ ವಸ್ತ್ರ ಧರಿಸಿ
ಮಿಥುನ : ಇಂದು ನಿಮ್ಮ ಮನಸ್ಸು ಚಂಚಲವಾಗಲಿದೆ. ಮಾತಿನಿಂದ ಕಲಹವೂ ಆಗಬಹುದು, ಆರೋಗ್ಯವೂ ವೃದ್ಧಿಯಾಗಲಿದೆ, ಜೊತೆಗೆ ಸ್ತ್ರೀ ಮೂಲಕ ಧನಪ್ರಾಪ್ತಿ ಹಾಗೂ ಧನ ವ್ಯಯವಾಗಲಿದೆ. ನಿಮ್ಮ ಮಕ್ಕಳಿಂದ ಹಾಗೂ ವಿದೇಶಗಳಿಂದ ಶುಭ ಸುದ್ದಿ ಬರಲಿದೆ.
ದೋಷ ಪರಿಹಾರ : ಹಸಿರು ವಸ್ತ್ರ ಧರಿಸಿ
ಕಟಕ : ಇಂದು ನಿಮ್ಮ ಆರೋಗ್ಯದಲ್ಲಿ ವ್ಯತ್ಯಯ ಸಂಜೆವೇಳೆಗೆ ಚೇತರಿಗೆ ಕಾಣಲಿದೆ. ನಿಮ್ಮ ತಂದೆಯಿಂದ ಸಹಾಯ ಹಾಗೂ ವ್ಯಾಪಾರದಲ್ಲಿ ಲಾಭ ದೊರೆಯಲಿದೆ. ಉತ್ತಮರ ಭೇಟಿ ಹಾಗೂ ಸದ್ವಿಚಾರ ಚಿಂತನೆ. ಸ್ತ್ರೀಯರೊಂದಿಗೆ ವಾಗ್ವಾದಗಳಾಗುವ ಸಾಧ್ಯತೆ ಇದೆ.
ದೋಷ ಪರಿಹಾರ : ಶ್ವೇತ ವಸ್ತ್ರ ಧರಿಸಿ.
ಸಿಂಹ : ಇಂದು ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ವ್ಯಯವಾಗುವ ಸಾಧ್ಯತೆ ಇದೆ. ನಿಮ್ಮ ಆತ್ಮ ಸ್ಥೈರ್ಯ ಸ್ವಲ್ಪ ಮಟ್ಟಿಗೆ ಕುಗ್ಗಲಿದೆ. ಅಂದುಕೊಂಡ ಕಾರ್ಯಗಳು ಸ್ವಲ್ಪ ವಿಳಂಬವಾಗಿ ನಡೆಯಲಿವೆ.
ದೋಷ ಪರಿಹಾರ : ಕೆಂಪು ವಸ್ತ್ರ ಧರಿಸಿ
ಕನ್ಯಾ : ಸಹೋದರರ ಬಾಂಧವ್ಯ ವೃದ್ಧಿ, ನೆಮ್ಮದಿಕಾಣುವ ದಿನ, ಹಳೆ ಸಾಲ ವಸೂಲಾಗಲಿದೆ, ಕುಟುಂಬದಲ್ಲಿ ಸ್ತ್ರೀಯರ ಸಹಕಾರ, ತಾಯಿ ಆರೋಗ್ಯದಲ್ಲಿ ವ್ಯತ್ಯಯ, ತಂದೆ ತಾಯಿಯರ ಸಲುವಾಗಿ ಪ್ರಯಾಣ ಸಾಧ್ಯತೆ.
ದೋಷ ಪರಿಹಾರ : ಶ್ರೀಹರಿ ಧ್ಯಾನ ಮಾಡಿ
ತುಲಾ : ನಿಮ್ಮ ಆರೋಗ್ಯ ಚೇತರಿಕೆಯಾಗಲಿದೆ. ನಿಮ್ಮ ಧನ ಸಮೃದ್ಧವಾಗಲಿದೆ. ಉತ್ತಮರ ಸಹಕಾರ. ಆತ್ಮೀಯ ಸ್ನೇಹಿತರ ಭೇಟಿ. ದಾಂಪತ್ಯದಲ್ಲಿ ಹೊಂದಾಣಿಕೆ ದೂರದ ಊರಿಗೆ ಪ್ರಯಾಣ ಹೊರಡುವ ಚಿಂತನೆ ನಡೆಸಿದ್ದೀರಿ.
ದೋಷ ಪರಿಹಾರ : ಬಿಳಿ ವಸ್ತ್ರ ದಾನ ಮಾಡಿ
ವೃಶ್ಚಿಕ : ನಿಮ್ಮ ಸಹೋದರರು ಪಾಲುದಾರಿಕೆಯಲ್ಲಿ ಭಾಗಿಯಾಗುತ್ತಾರೆ. ಸ್ವಲ್ಪ ಗೊಂದಲವೂ ಇದೆ. ಯಾವುದೇ ಕಾರ್ಯ ಮಾಡುವ ಮುನ್ನ ಗುರು ದರ್ಶನ ಹಾಗೂ ಗುರು ಮಾರ್ಗದರ್ಶನ ಪಡೆಯುವುದು ಉತ್ತಮ.
ದೋಷ ಪರಿಹಾರ : ಹವಳ ಧರಿಸಿ
ಧನಸ್ಸು : ನಿಮ್ಮ ಮನಸ್ಸಿಗೆ ಇಂದು ಅಶಾಂತಿ ಯಾವ ಕಾರ್ಯವೂ ಪೂರ್ಣವಾಗಲಿಲ್ಲ ಎಂಬ ಚಿಂತೆ. ನಿಮ್ಮ ದೇಹ ಸ್ವಲ್ಪ ಕೃಷವಾಗಲಿದೆ. ಧನ ಲಾಭದ ಜೊತೆ ಸ್ವಲ್ಪ ವ್ಯಯವೂ ಇದೆ. ವೃಥಾ ಖರ್ಚು ಮಾಡುವ ಸಂದರ್ಭ ಒದಗಬಹುದು.
ದೋಷ ಪರಿಹಾರ : ಶನಿ ದೇವರಿಗೆ ಎಳ್ಳುದಾನ ಮಾಡಿ.
ಮಕರ : ಇಂದು ನಿಮ್ಮ ಯೋಚನೆಯಲ್ಲಿ ದ್ವಂದ್ವ ಭಾವ ಮೂಡುವ ಸಾಧ್ಯತೆ ಇದೆ. ಶುಭ ಕಾರ್ಯಗಳಲ್ಲಿ ಅಥವಾ ಸ್ನೇಹಿತರೊಂದಿಗೆ ಕಲಾಪಗಳಲ್ಲಿ ಭಾಗಿಯಾಗುವ ದಿನವಾಗಿದೆ. ಮಿಶ್ರಫಲ.
ದೋಷ ಪರಿಹಾರ : ಎಳ್ಳು ದಾನ ಮಾಡಿ
ಕುಂಭ : ನಿಮ್ಮ ಇಷ್ಟದವರೇ ನಿಮ್ಮ ಮನಸ್ಸಿಗೆ ವಿರುದ್ಧವಾಗಿ ನಡೆದುಕೊಳ್ಳುವ ಸಾಧ್ಯತೆ ಇದೆ. ಮಾನಸಿಕವಾಗಿ ಸ್ವಲ್ಪ ಖಿನ್ನರಾಗುತ್ತೀರಿ. ಅಂದುಕೊಂಡ ಕಾರ್ಯಗಳು ಸಫಲವಾಗುವುದಿಲ್ಲ. ನಿಮ್ಮ ಸ್ನೇಹಿತರ ಸಲಹೆ, ಮಾರ್ಗದರ್ಶನ ಪಡೆಯಿರಿ.
ದೋಷ ಪರಿಹಾರ : ರುದ್ರಾಭಿಷೇಕ ಮಾಡಿಸಿ
ಮೀನ : ನಿಮ್ಮ ತಾಯಿ ನಿಮ್ಮ ಆರೋಗ್ಯ ಕಾಳಜಿ ಮಾಡುತ್ತಾರೆ. ನಿಮ್ಮ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಯವಾಗಲಿದೆ. ಸ್ವಲ್ಪ ಮಟ್ಟಿಗೆ ಧನಲಾಭವೂ ಇದೆ. ಹೆಂಡತಿಯಿಂದ ಸಹಕಾರ ದೊರೆಯುತ್ತದೆ.
ದೋಷ ಪರಿಹಾರ : ಅರಳಿ ವೃಕ್ಷಕ್ಕೆ ಪ್ರದಕ್ಷಿಣೆ ಹಾಕಿ