ಈ ರಾಶಿವರಿಗೆ ಸಿಗಲಿದೆ ಭಾರೀ ಯಶಸ್ಸು, ಎಚ್ಚರಿಕೆ ಇರಲಿ
ಇಂದು ಯಾವ ರಾಶಿಗೆ ಯಾವ ಫಲ..? ತಿಳಿಯರಿ ರಾಶಿ ಭವಿಷ್ಯದ ಮೂಲಕ
ಮೇಷ: ಈ ದಿನ ಪೂರ್ತಿ ಆರಾಮವಾಗಿ ಕಳೆಯಲಿದ್ದೀರಿ. ಇಂದಿನ ವಿಶ್ರಾಂತಿಯಿಂದ ನಾಳೆಗಳಲ್ಲಿ ಉತ್ಸಾಹ ಹೆಚ್ಚಾಗಲಿದೆ. ಶುಭ ಫಲ.
ವೃಷಭ: ನಿಮ್ಮ ತಪ್ಪುಗಳನ್ನು ತೋರಿಸುವ ಗುರುವಿನ ಪರಿಚಯವಾಗಲಿದೆ. ಕಣ್ಣಿನ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಿ. ಧೈರ್ಯ ಹೆಚ್ಚಲಿದೆ
ಮಿಥುನ: ಮತ್ತೊಬ್ಬರಿಗೆ ಸಹಾಯ ಮಾಡಲು ಸಾಧ್ಯ ವಾದರೆ ಮಾಡಿ, ಇಲ್ಲವಾದರೆ ಸುಮ್ಮನೆ ಇದ್ದು ಬಿಡುವುದು ಒಳ್ಳೆಯದ್ದು. ಕೋಪ ಬೇಡ.
ಕಟಕ: ಆತ್ಮೀಯರ ಮಧ್ಯೆ ದ್ವೇಷ ಹುಟ್ಟುವ ಹಾಗೆ ಮಾಡುವುದು ಸರಿಯಲ್ಲ. ಸಾಮರಸ್ಯವನ್ನು ಹೆಚ್ಚಿಸಿ, ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ.
ಸಿಂಹ: ಇಡೀ ದಿನ ದಿಕ್ಕು ತಪ್ಪಿದವರ ಹಾಗೆ ಸುತ್ತಾಡಲಿದ್ದೀರಿ. ಕ್ಷಮಾಗುಣ ಅಧಿಕವಾಗಲಿದೆ. ಭಾವನಾತ್ಮಕವಾಗಿ ಬಂಧಿಯಾಗಲಿದ್ದೀರಿ
ಕನ್ಯಾ: ಹೊಸ ವ್ಯಕ್ತಿಗಳು ನಿಮ್ಮ ಸಹಾಯ ಕೋರಿ ನಿಮ್ಮಲ್ಲಿಗೆ ಬರಲಿದ್ದಾರೆ. ನಾಳೆಗಳ ಕೆಲಸವನ್ನು ಇಂದೇ ಮಾಡಿ ಮುಗಿಸುವುದು ಉತ್ತಮ.
ತುಲಾ: ಆತ್ಮೀಯರೇ ಆದರೂ ಯಾರನ್ನೂ ತಕ್ಷಣಕ್ಕೆ ನಂಬದಿರಿ. ಹೆಚ್ಚು ಲವಲವಿಕೆಯಿಂದ ಕೆಲಸ ಮಾಡಲಿದ್ದೀರಿ. ನಿಮ್ಮ ಮಾತಿಗೆ ಬೆಲೆ ಇದೆ.
ವೃಶ್ಚಿಕ: ಕೆಟ್ಟ ಸ್ನೇಹಿತರು ನಿಮ್ಮ ಸಹಾಯ ಬಯಸಿ ಹತ್ತಿರವಾಗಲಿದ್ದಾರೆ. ಎಚ್ಚರಿಕೆ ಅಗತ್ಯ. ಮನೆಯ ಖರ್ಚು ಹೊರೆಯಾಗಲಿದೆ.
ಧನುಸ್ಸು: ಮನೆ ಮದ್ದಿನಿಂದಲೇ ಆರೋಗ್ಯ ಸರಿಯಾಗಲಿದೆ. ಪ್ರಸಿದ್ಧ ದೇವಸ್ಥಾನಗಳಿಗೆ ಹೋಗುವ ಆಲೋಚನೆ ಮಾಡಿಕೊಳ್ಳಲಿದ್ದೀರಿ.
ಮಕರ: ಅತಿ ಬುದ್ಧಿವಂತರಿಂದ ಸಾಧ್ಯವಾದಷ್ಟು ದೂರ ಇದ್ದರೆ ಒಳಿತು. ಸ್ನೇಹಿತರ ಮನೆಯ ಶುಭ ಸಮಾರಂಭದಲ್ಲಿ ಭಾಗಿಯಾಗಲಿದ್ದೀರಿ.
ಕುಂಭ: ನಿಮ್ಮದಲ್ಲದ ವಸ್ತುವಿಗೆ ಹೆಚ್ಚು ಆತೊರೆಯುವುದು ಬೇಡ. ಮನಸ್ಸಿಟ್ಟು ಮಾಡಿದ ಕೆಲಸದಲ್ಲಿ ಖಂಡಿತ ಯಶವಿದೆ.
ಮೀನ: ತಂದೆಯ ಆರೋಗ್ಯದ ಬಗೆಗಿನ ಚಿಂತೆಗೆ ಪರಿಹಾರದ ದೊರೆಯಲಿದೆ. ನಾನೇ ಎಲ್ಲಾ, ನನ್ನಿಂದಲೇ ಎಲ್ಲಾ ಎನ್ನುವ ಅಹಂ ಬೇಡ.