ಇಂದು ಈ ರಾಶಿಯವರಿಗೆ ಭಾರೀ ಲಾಭವಾಗಲಿದೆ
ಅಕ್ಟೋಬರ್ 16 ಬುಧವಾರ, ಇಂದು ಯಾವ ರಾಶಿಗೆ ಯಾವ ಫಲ ಹೇಗಿದೆ ಇಂದಿನ ಭವಿಷ್ಯ ?
ಮೇಷ: ಅಂತರಂಗ ಹೇಳಿದ ಮಾತುಗಳಿಗೆ ಅನುಗುಣವಾಗಿ ನಡೆದುಕೊಳ್ಳಿ. ಎಲ್ಲರ ಪಾಲಿಗೂ ನೀವು ಒಳ್ಳೆಯವರಾಗಲು ಆಗದು.
ವೃಷಭ: ಕೋಪ ಎನ್ನುವುದು ಮೊದಲು ಸುಡುವುದು ನಿಮ್ಮನ್ನೇ. ಯಾರದೋ ತಪ್ಪಿಗೆ ಇನ್ನಾರದ್ದೋ ಮೇಲೆ ಸಿಟ್ಟು ಮಾಡಿಕೊಳ್ಳುವುದು ಬೇಡ.
ಮಿಥುನ: ಬಂಧು ಬಳಗ ಇಂದು ನಿಮಗೆ ಹತ್ತಿರವಾಗಲಿದೆ. ಓಡಾಟ ಹೆಚ್ಚಾಗಲಿದೆ. ಅಂತೆಯೇ ಆದಾಯದಲ್ಲಿಯೂ ಏರಿಕೆ ಕಾಣಲಿದ್ದೀರಿ.
ಹಣಕಾಸಿನ ಸಂಬಂಧ ಎಚ್ಚರ : ಮತ್ತೊಂದು ರಾಶಿಗೆ ಬಂಪರ್ - ವಾರ ಭವಿಷ್ಯ
ಕಟಕ: ಒಳ್ಳೆಯ ಗಳಿಗೆಗಾಗಿ ಕಾಯುತ್ತಾ ಕೂರುವ ಬದಲಿಗೆ ನಿಮಗೆ ಸಿಕ್ಕ ಸಮಯವನ್ನೇ ಒಳ್ಳೆಯದಾಗಿ ಬದಲಾಯಿಸಿಕೊಂಡು ಸಾಗಿ.
ಸಿಂಹ: ಆಹಾರ, ನಿದ್ದೆ, ಮಾತಿನ ಮೇಲೆ ಮಿತಿ ಇರಲಿ. ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಇಂದು ಅಧಿಕ ಲಾಭ ದೊರೆಯುವ ಸಾಧ್ಯತೆ ಇದೆ.
ಕನ್ಯಾ: ಅತ್ತೆಯ ಮೇಲಿನ ಕೋಪ ಕತ್ತೆಯ ಮೇಲೆ ಎನ್ನುವ ಹಾಗೆ ಇಂದಿನ ದಿನ ಆಗಲಿದೆ. ದೂರದ ಪ್ರಯಾಣ ಮಾಡಬೇಕಾದ ಅನಿವಾರ್ಯ.
ತುಲಾ: ಅತಿ ವಿನಯವಂತಿಕೆ ಒಳ್ಳೆಯದಲ್ಲ. ನಿಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಮುಂದೆ ಸಾಗುವ ತುಲಾ ಮನಸ್ಸು ಮಾಡಲಿದ್ದೀರಿ. ಶುಭ ಫಲ.
ವೃಶ್ಚಿಕ: ಕಾರ್ಯವಾಸಿ ಕತ್ತೆ ಕಾಲು ಹಿಡಿಯಬೇಕು. ಜಾಣತನದಿಂದ ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳಿ. ನೆಮ್ಮದಿ ಹೆಚ್ಚಾಗಲಿದೆ.
ಧನಸ್ಸು: ಮತ್ತೊಬ್ಬರನ್ನು ಅನುಕರಣೆ ಮಾಡಲು ಹೋಗದಿರಿ. ಎಲ್ಲರ ಮೇಲೂ ನಂಬಿಕೆ ಇರಲಿ. ನಿಮ್ಮ ನಿರ್ಧಾರವೇ ಅಂತಿಮವಾಗಿರಲಿ.
101 ವರ್ಷಗಳ ಹಿಂದೆ ಸಮಾಧಿಯಾದ ಶಿರಡಿ ಸಾಯಿ ಬಾಬಾರಿಗೆ ನಮಿಸುತ್ತಾ
ಮಕರ: ಯಾರೋ ಮೂರನೇಯ ವ್ಯಕ್ತಿಯನ್ನು ನಂಬಿಕೊಂಡು ದಿನವಿಡೀ ಅಲೆದಾಡುವಿರಿ. ನಿಮ್ಮ ಶಕ್ತಿಯ ಮೇಲೆ ನಿಮಗೆ ವಿಶ್ವಾಸ ಇರಲಿ.
ಕುಂಭ: ನಡೆಯುವಾಗ ಸಾವಿರ ಅಡೆತಡೆಗಳು ಬರುವುದು ಸಹಜ. ಅವುಗಳಿಗೆ ಹೆದರಿಕೊಂಡು ಪ್ರಯಾಣ ನಿಲ್ಲಿಸದಿರಿ.
ಮೀನ: ಅಸಮರ್ಥರ ಬಗ್ಗೆ ತಲೆ ಕೆಡಿಸಿಕೊಳ್ಳುವುದರಿಂದ ಏನೂ ಪ್ರಯೋಜನವಿಲ್ಲ. ನಿಮ್ಮ ಪಾಲಿನ ಕಾಯಕವನ್ನು ನೀವು ಮಾಡಿರಿ.
"