Asianet Suvarna News Asianet Suvarna News

ಈ ರಾಶಿಗೆ ಹೆಚ್ಚಿನ ಸಂತೋಷ : ಕಾರ್ಯಗಳಿಂದ ಲಾಭ

ಇಂದು ಯಾವ ರಾಶಿಗೆ ಯಾವ ಫಲ..? ತಿಳಿಯರಿ ರಾಶಿ ಭವಿಷ್ಯದ ಮೂಲಕ

Daily Bhavishya 13 April 2019
Author
Bengaluru, First Published Apr 13, 2019, 7:11 AM IST

ಈ ರಾಶಿಗೆ ಹೆಚ್ಚಿನ ಸಂತೋಷ : ಕಾರ್ಯಗಳಿಂದ ಲಾಭ

ಮೇಷ : ಹಣದಿಂದಲೇ ಎಲ್ಲವೂ ಸಾಧ್ಯವಾಗುವುದಿಲ್ಲ ಎನ್ನುವ ಸತ್ಯ ಇಂದು ನಿಮಗೆ ತಿಳಿಯಲಿದೆ. ಸ್ನೇಹಕ್ಕೆ ಬೆಲೆ ನೀಡಲಿದ್ದೀರಿ. ಗೊಂದಲ ಬೇಡ

ವೃಷಭ : ನಿಮ್ಮ ಆಪ್ತ ಬಳಗದಲ್ಲಿ ಇರುವವರಿಂದಲೇ ಇಂದು ನಿಮಗೆ ನೋವಾಗಲಿದೆ. ಯಾರ ಮೇಲೆಯೂ ಆರೋಪ ಬೇಡ

ಮಿಥುನ : ಸಣ್ಣ ಪುಟ್ಟ ವಿಚಾರಗಳಿಂದ ಹೆಚ್ಚು ಸಂತೋಷ ಅನುಭವಿಸಲಿದ್ದೀರಿ. ಆಮಿಷಗಳಿಗೆ ಬಲಿಯಾಗುವುದು ಬೇಡ, ಧೈರ್ಯ  ಹೆಚ್ಚಾಗಲಿದೆ. 

ಕಟಕ : ಯಾರು ಏನಾದರು ಅಂದುಕೊಳ್ಳಲಿ ನಿಮ್ಮ ದಾರಿಯಲ್ಲಿ ನೀವು ಸಾಗುತ್ತಿರಿ, ಆರೋಗ್ಯದ ಕಡೆಗೆ ಗಮನವಿರಲಿ

ಸಿಂಹ : ಆದಾಯದಲ್ಲಿ ಇಂದು ಸ್ವಲ್ಪ ಏರಿಕೆ ಕಂಡು ಬರಲಿದೆ. ಮನೆಯ ಖರ್ಚಿನಲ್ಲಿ ಏರಿಕೆ. ವೃತ್ತಿಯಲ್ಲಿ ಕಿರಿಕಿರಿ ಅನುಭವಿಸುವ ಸಾಧ್ಯತೆ

ಕನ್ಯಾ : ಕೊಟ್ಟ ಮಾತನ್ನು ಯಾವುದೇ ಕಾರಣಕ್ಕೂ ಮರೆಯುವುದು ಬೇಡ, ಬೇರೆಯವರ ತಪ್ಪಿಗೆ ನೀವು ದಂಡ ತೆರಬೇಕಾಗಿ ಬರಬಹುದು

ತುಲಾ : ತಾಳ್ಮೆಯಿಂದ ಇದ್ದರೆ ನಿಮಗೆ ಹೆಚ್ಚು ಅನುಕೂಲವಾಗುವುದು. ಚಿಂತೆ ನಿಮ್ಮನ್ನ ಬಾಧಿಸದು. ಸಕಲ ಕಾರ್ಯಗಳೂ ಆಗಲಿವೆ. 

ವೃಶ್ಚಿಕ : ನೆರೆ ಮನೆಯವರ ಕಷ್ಟಕ್ಕೆ ನೆರವಾಗಲಿದ್ದೀರಿ. ನಿತ್ಯದ ಚಟುವಟಿಕೆಗಳಲ್ಲಿ ಸ್ವಲ್ಪ ಬದಾವಣೆ ಕಂಡು ಬರಲಿದೆ. ಕಣ್ಣಿನ ಸಮಸ್ಯೆಗೆ ಪರಿಹಾರ

ಧನಸ್ಸು : ಉಂಡುಹೋದ ಕೊಂಡು ಹೋದ ಎನ್ನುವಂತೆ ಮಾಡದಿರಿ. ದೇವರಲ್ಲಿ ಹೆಚ್ಚು ನಂಬಿಕೆ ಹುಟ್ಟಲಿದೆ. ತಂದೆಯ ಮಾತಿಗೆ ಬೆಲೆ ನೀಡಿ. 

ಮಕರ : ಶತ್ರುಗಳು ಕೂಡ ಇಂದು ನಿಮಗೆ ಅನುಕೂಲವಾಗುವಂತೆ ಕೆಲಸ ಮಾಡಲಿದ್ದಾರೆ. ಸಣ್ಣ ವಿಚಾರಗಳಿಗೆ ಮನಸ್ಸು ಕೆಡಿಸಿಕೊಳ್ಳದಿರಿ. 

ಕುಂಭ : ನಿಮ್ಮ ಕಾರ್ಯಗಳಿಗೆ ನಿಮ್ಮ ವಿರುದ್ಧದ ಟೀಕೆಗೆ ಉತ್ತರವಾಗಲಿ. ಮಾತಿನಿಂದ ಮಾನ ಹಾನಿಯಾಗುವ ಸಾಧ್ಯತೆ ಹೆಚ್ಚು.

ಮೀನ : ದುಷ್ಟರನ್ನು ಕಂಡರೆ ದೂರವಿರಿ. ಆಹಾರ ಕ್ರಮದಲ್ಲಿ ವ್ಯತ್ಯಯವಾಗಲಿದೆ. ಇಂದು ಸ್ವಾರ್ಥ ವ್ಯಕ್ತಿಗಳಿಗೆ ತಕ್ಕ ಉತ್ತರ ನೀಡಲಿದ್ದೀರಿ. 

Follow Us:
Download App:
  • android
  • ios